ವಿವಿಧೆಡೆ ಸನ್ಮಾನ: ನೂತನ ಸಚಿವರನ್ನು ಬಿಡದಿಯಿಂದ ಚನ್ನಪಟ್ಟಣದವರೆಗೂ ಬಿಜೆಪಿ ಕಾರ್ಯಕರ್ತರು ಅಲ್ಲಲ್ಲಿ ಸ್ವಾಗತ ಮಾಡಿದರು. ಬಿಡದಿಯ ಬೈರಮಂಗಲ ಕ್ರಾಸ್ನಲ್ಲಿ ಪ್ರತಿಭಟನಾ ನಿರತರ ಕಾರ್ಮಿಕರು, ಸಿಪಿವೈಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ಈ ವೇಳೆ ಸಮಸ್ಯೆ ಬಗೆಹಿರಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಯೋಗೇಶ್ವರ್, ಮೂರ್ನಾಲ್ಕು ದಿನದಲ್ಲಿ ಸಭೆ ಕರೆದು ಚರ್ಚಿಸುವ ಭರವಸೆ ನೀಡಿದರು. ನಂತರ ಬೈರಮಂಗಲ ಕ್ರಾಸ್ನಿಂದ ಹಿಡಿದು ಬಿಡದಿ ಬಿಜಿಎಸ್ ವೃತ್ತದವರೆಗೆ, ಅಭಿಮಾನಿಗಳು ಸಿಪಿವೈ ಅವರನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿದರು.