<p><strong>ಸೂಲಿಬೆಲೆ: </strong>ಸೂಲಿಬೆಲೆ ಗಿಡ್ಡಪ್ಪನಹಳ್ಳಿ ಮುಖ್ಯ ರಸ್ತೆ ಬದಿಯಲ್ಲಿ ನಿರ್ಮಿಸಲಾಗಿರುವ ಕಾಲುವೆಯ ನೀರು ಮುಂದೆ ಹರಿಯಲು ಯಾವುದೇ ಕಾಲುವೆ ಅಥವಾ ಪರ್ಯಾಯ ವ್ಯವಸ್ಥೆ ಇಲ್ಲದೆ ಕಾಲುವೆಯಲ್ಲಿ ನೀರು ನಿಲ್ಲುತ್ತಿದೆ.</p>.<p>ಸೂಲಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಲಿಬೆಲೆ-ಗಿಡ್ಡಪ್ಪನಹಳ್ಳಿ ಮುಖ್ಯ ರಸ್ತೆಯಲ್ಲಿ, ನರೇಗಾ ಕಾಮಗಾರಿಯಡಿಯಲ್ಲಿ 2019-20ನೇ ಸಾಲಿನಲ್ಲಿ ಸುಮಾರು ₹ 9.95 ಲಕ್ಷಗಳ ಅಂದಾಜು ವೆಚ್ಚದಲ್ಲಿ ರಸ್ತೆ ಬದಿಯಲ್ಲಿ ಕಾಲುವೆ ನಿರ್ಮಾಣ ಮಾಡಲಾಗಿದೆ. ಪಟ್ಟಣದ ಶೇ 50ರಷ್ಟು ನೀರು ಈ ಕಾಲುವೆಗೆ ಹರಿಯುತ್ತದೆ. ಆದರೆ ಕಾಲುವೆ ನಿರ್ಮಾಣವಾಗಿರುವ ತನಕ ನೀರು ಬಂದು ಅಲ್ಲಿಂದ ಮುಂದೆ ಹರಿಯಲು ಜಾಗ ಇಲ್ಲ. ಕಾಮಗಾರಿಗೆ ಬಳಸಿರುವ ನೈಸರ್ಗಿಕ, ಮಾನವ ಹಾಗೂ ಆರ್ಥಿಕ ಸಂಪನ್ಮೂಲ ನಿಷ್ರಯೋಜಕವಾಗಿದೆ.</p>.<p>ಕಾಲುವೆ ಕಾಮಗಾರಿಯನ್ನು ಮುಂದುವರೆಸಿದರೆ, ಕಾಲುವೆಯ ನೀರು ನೇರ ಕೆರೆಗೆ ಸಂಪರ್ಕವಿರುವ ದೊಡ್ಡ ಕಾಲುವೆಗೆ ಹರಿಯುತ್ತದೆ. ಇದರಿಂದ ಕೆರೆಗೆ ನೀರು ಸಂಗ್ರಹವಾಗಿ ಅಂತರ್ಜಲದ ವೃದ್ಧಿಯಾಗಲು ಪೂರಕವಾಗುತ್ತದೆ. ಈಗಾಗಲೇ ಮಳೆ ಆರಂಭ ಆಗಿರುವುದರಿಂದ ತುರ್ತಾಗಿ ಕಾಮಗಾರಿಯನ್ನು ಮುಂದುವರೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೂಲಿಬೆಲೆ: </strong>ಸೂಲಿಬೆಲೆ ಗಿಡ್ಡಪ್ಪನಹಳ್ಳಿ ಮುಖ್ಯ ರಸ್ತೆ ಬದಿಯಲ್ಲಿ ನಿರ್ಮಿಸಲಾಗಿರುವ ಕಾಲುವೆಯ ನೀರು ಮುಂದೆ ಹರಿಯಲು ಯಾವುದೇ ಕಾಲುವೆ ಅಥವಾ ಪರ್ಯಾಯ ವ್ಯವಸ್ಥೆ ಇಲ್ಲದೆ ಕಾಲುವೆಯಲ್ಲಿ ನೀರು ನಿಲ್ಲುತ್ತಿದೆ.</p>.<p>ಸೂಲಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಲಿಬೆಲೆ-ಗಿಡ್ಡಪ್ಪನಹಳ್ಳಿ ಮುಖ್ಯ ರಸ್ತೆಯಲ್ಲಿ, ನರೇಗಾ ಕಾಮಗಾರಿಯಡಿಯಲ್ಲಿ 2019-20ನೇ ಸಾಲಿನಲ್ಲಿ ಸುಮಾರು ₹ 9.95 ಲಕ್ಷಗಳ ಅಂದಾಜು ವೆಚ್ಚದಲ್ಲಿ ರಸ್ತೆ ಬದಿಯಲ್ಲಿ ಕಾಲುವೆ ನಿರ್ಮಾಣ ಮಾಡಲಾಗಿದೆ. ಪಟ್ಟಣದ ಶೇ 50ರಷ್ಟು ನೀರು ಈ ಕಾಲುವೆಗೆ ಹರಿಯುತ್ತದೆ. ಆದರೆ ಕಾಲುವೆ ನಿರ್ಮಾಣವಾಗಿರುವ ತನಕ ನೀರು ಬಂದು ಅಲ್ಲಿಂದ ಮುಂದೆ ಹರಿಯಲು ಜಾಗ ಇಲ್ಲ. ಕಾಮಗಾರಿಗೆ ಬಳಸಿರುವ ನೈಸರ್ಗಿಕ, ಮಾನವ ಹಾಗೂ ಆರ್ಥಿಕ ಸಂಪನ್ಮೂಲ ನಿಷ್ರಯೋಜಕವಾಗಿದೆ.</p>.<p>ಕಾಲುವೆ ಕಾಮಗಾರಿಯನ್ನು ಮುಂದುವರೆಸಿದರೆ, ಕಾಲುವೆಯ ನೀರು ನೇರ ಕೆರೆಗೆ ಸಂಪರ್ಕವಿರುವ ದೊಡ್ಡ ಕಾಲುವೆಗೆ ಹರಿಯುತ್ತದೆ. ಇದರಿಂದ ಕೆರೆಗೆ ನೀರು ಸಂಗ್ರಹವಾಗಿ ಅಂತರ್ಜಲದ ವೃದ್ಧಿಯಾಗಲು ಪೂರಕವಾಗುತ್ತದೆ. ಈಗಾಗಲೇ ಮಳೆ ಆರಂಭ ಆಗಿರುವುದರಿಂದ ತುರ್ತಾಗಿ ಕಾಮಗಾರಿಯನ್ನು ಮುಂದುವರೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>