‘ಕೊಲೆ ಆರೋಪಿ ಸೂರಜ್ ಸಿಂಗ್ 2015ರಲ್ಲಿ ಮಧುಕರ್ ಅಂಗೂರ್ ಜೊತೆಗಿದ್ದ 2017ರಲ್ಲಿ ನ್ಯಾಯಾಲಯದ ಆದೇಶದಂತೆ ಸುಧೀರ್ ಅಂಗೂರ್ ಆಡಳಿತದ ಚುಕ್ಕಾಣಿ ಹಿಡಿದಾಗ ಎಲ್ಲ ನೌಕರರಂತೆ ಸೂರಜ್ ಸಿಂಗ್ನನ್ನು ಮುಂದುವರಿಸಲಾಗಿತ್ತು. ಆತ ನೌಕರ ಎಂಬುದನ್ನು ಹೊರತುಪಡಿಸಿದರೆ ವಿಶ್ವವಿದ್ಯಾಲಯಕ್ಕೂ ಆರೋಪಿಗೂ ಸಂಬಂಧವಿಲ್ಲ. ನವೆಂಬರ್ 3ರಂದು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಸಿದ್ಧತೆ ಮಾಡಲಾಗಿತ್ತು. ಹಲವು ವರ್ಷಗಳಿಂದ ಘಟಿಕೋತ್ಸವ ನಡೆದಿರಲಿಲ್ಲ. ಸುಮಾರು 5,000 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹಲವು ಮಂದಿ ಗಣ್ಯರನ್ನು ಆಹ್ವಾನಿಸಲಾಗಿತ್ತು. ವಿಶ್ವವಿದ್ಯಾಲಯದ ಹೆಸರಿಗೆ ಚ್ಯುತಿ ತರುವ ಸಲುವಾಗಿ ಹುನ್ನಾರ ನಡೆಸಲಾಗಿದೆ’ ಎಂದರು.