ರೈತರು ತಾವು ಬೆಳೆದ ವಸ್ತುಗಳಿಗೆ ತರಕಾರಿ, ಹಣ್ಣು ಗಳಿಗೆ ಮಾರುಕಟ್ಟೆ ಇಲ್ಲದೇ ರಸ್ತೆಗಳಲ್ಲಿ ಕೊಳೆಯುವಂತಾಯಿತು. ಇದರಿಂದ ರೈತರ ಬಾಳು ಬೀದಿಗೆ ಬಂದಿತು. ಆದರೆ ಈಗ ಸರ್ಕಾರ ಘೋಷಿಸಿರುವ ₹ 20 ಲಕ್ಷ ಕೋಟಿ ಪರಿಹಾರದಲ್ಲೂ ಯಾವುದೇ ಪ್ರಯೋಜನವಿಲ್ಲ. ವಲಸೆ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಕೇವಲ ₹ 500 ಹಾಕುತ್ತಿದ್ದು ಅದರಿಂದ ಅವರಿಗೆ ಟೀ ಕುಡಿಯಲೂ ಸಾದ್ಯವಾಗುವುದಿಲ್ಲ ಎಂದರು. ಬದಲಾಗಿ ಆದಾಯ ತೆರಿಗೆ ಪಾವತಿಸುವ ಮಿತಿಗಳ ಹೊರಗಿರುವ ಎಲ್ಲಾ ಕುಟುಂಬಗಳಿಗೆ ಬರುವ ಆರು ತಿಂಗಳು ಪ್ರತಿ ತಿಂಗಳಿಗೆ ₹ 7,500 ವರ್ಗಾಯಿಸಬೇಕು. ಇದರಿಂದ ದೇಶದಲ್ಲಿ ಹಣ ಜನರ ಕೈಯಲ್ಲಿ ಓಡಾಡುತ್ತದೆ. ದೇಶದ ಆರ್ಥಿಕ ವ್ಯವಸ್ಥೆಯೂ ಸುಧಾರಿಸುತ್ತದೆ ಎಂದರು.