‘ಸೂರ್ಯೋದಯ ಸಮಯಕ್ಕಾಗಲೇ ಬೆಟ್ಟದ ತುದಿಯನ್ನು ತಲುಪಿದ್ದರೆ ಪಶ್ಚಿಮದ ಕಡೆಯಿಂದ ಹತ್ತಿಯಂತೆ ತೇಲಿ ಬರುವ ಮೋಡಗಳ ಸಾಲು ಬೃಹತ್ ಕಲ್ಲು ಬಂಡೆಗಳು ಸೇರಿದಂತೆ ಇಡೀ ಬೆಟ್ಟಕ್ಕೆ ಮುತ್ತಿಗೆ ಹಾಕುತ್ತವೆ. ಬೆಟ್ಟದ ತಪ್ಪಲಿನ ಹಳ್ಳಿಗಳ ಕಡೆಗೆ ಒಮ್ಮೆ ಕಣ್ಣು ಹಾಸಿದರೆ ಇಡೀ ಪ್ರದೇಶ ಚಲನ ಚಿತ್ರಗಳಲ್ಲಿ ತೋರಿಸುವ ಶಿವನ ಕೈಲಾಸ ಪರ್ವತದ ದೃಶ್ಯದಂತೆ ಕ್ಷಣಕಾಲ ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಕಲ್ಲು ಬಂಡೆಗಳ ಮೇಲೆ ಕುಳಿತಿರುವ ನಮ್ಮನ್ನು ಸಹ ಮೋಡುಗಳು ಮುತ್ತು ಕೊಟ್ಟುಹೋಗುತ್ತಿರುವಂತ ಅನುಭವ ಆಗುತ್ತದೆ’ ಎನ್ನುತ್ತಾರೆ ಚಾರಣಿಗ ಚಿದಾನಂದ್, ದಿವಾಕರ್ನಾಗ್.