ಬಾಯಿ ಕ್ಯಾನ್ಸರ್, ಹೃದಯ ಕ್ಯಾನ್ಸರ್, ಸಂತಾನ ಭಾಗ್ಯ ಇಲ್ಲದಂತಾಗುತ್ತಿರುವಂತ ದುಷ್ಪರಿಣಾಮಗಳು ಹೆಚ್ಚಾಗುತ್ತಿದ್ದರೂ ಅರಿವಿನ ಕೊರತೆ ಕಾಡುತ್ತಿದೆ. ಕಿದ್ವಾಯಿ ಆಸ್ಪತ್ರೆಗೆ ಪ್ರತಿ ದಿನ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ 1,800 ಜನ ದಾಖಲಾಗುತ್ತಿದ್ದು ಇವರಲ್ಲಿ 800 ರಿಂದ 900 ಮಂದಿ ತಂಬಾಕು ಸೇವನೆ ಮಾಡುವವರಾಗಿದ್ದಾರೆ. ತಂಬಾಕು ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಬೇಕಿದೆ ಎಂದರು.