<p><strong>ದೇವನಹಳ್ಳಿ:</strong> ಸಾಮರಸ್ಯದ ತತ್ವದಡಿಯಲ್ಲಿ ಪಟ್ಟಣದ ಕದ್ದೂಸ್ ಬಡಾವಣೆಯಲ್ಲಿರುವ ಅಮಿನ ಮಸೀದಿಯಲ್ಲಿ ರಂಜಾನ್ ಮಾಸದ ಪ್ರಯುಕ್ತ ಇಫ್ತಾರ್ ಕೂಟವನ್ನು ಎಲ್ಲ ಧರ್ಮದ ಜನರಿಗೆ ಮಂಗಳವಾರ ಏರ್ಪಡಿಸಲಾಗಿತ್ತು.</p>.<p>ಇಫ್ತಾರ್ ಕೂಟಕ್ಕೆ ಚಾಲನೆ ನೀಡಿದ ಮಸೀದಿಯ ಅಧ್ಯಕ್ಷ ಕುದ್ದೂಸ್ ಪಾಷ ಮಾತನಾಡಿ, ರಂಜಾನ್ ಹಬ್ಬವು ಬಹಳ ಪವಿತ್ರದಿಂದ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗಿದೆ. ನೆರೆಹೊರೆಯವರೆಲ್ಲರೂ ಒಗ್ಗೂಡಿ ಯಾವುದೇ ಭೇದಭಾವವಿಲ್ಲದೆ ಕಾರ್ಯಕ್ರಮವನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.</p>.<p>ಮುಸ್ಲಿಂ ಮಹಿಳೆಯರು ಇಲ್ಲಿನ ಅಮೀನ ಮಸೀದಿಯಲ್ಲಿ ಪ್ರಾರ್ಥನೆಗೆ ಬರುತ್ತಿದ್ದು, ಜತೆಗೆ ಅನ್ಯಧರ್ಮಿಯರು ಸಹ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.</p>.<p>ಸಾಮೂಹಿಕ ಇಫ್ತಾರ್ ಕೂಟದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಲ್ಲಿನ ಆವತಿ ಮಸೀದಿ, ಜಾಮೀಯ ಅಹಲೇ ಅಹದೀಸ್ ಮಸೀದಿ ಮತ್ತು ವಿನಾಯಕ ನಗರದ ಮಸೀದಿಯಲ್ಲಿಯೂ ಸಹ ಇಫ್ತಾರ್ ಏರ್ಪಡಿಸಲಾಗಿತ್ತು.</p>.<p>ಉಪನ್ಯಾಸಕ ಡಾ.ಶಫೀಕ್ ಅಹಮದ್, ಮಸೀದಿ ಕಾರ್ಯದರ್ಶಿ ಎ.ಎಸ್.ಇಬ್ರಾಹಿಂ, ಮಸೀದಿ ಇಮಾಮ್ ನದೀಮ್, ಬಾಬು, ಸೈಯದ್ಬಾಬು, ಪತ್ರಕರ್ತ ಹೈದರ್ಸಾಬ್, ಆರೀಫ್, ಅರ್ಷದ್, ಜಬೀವುಲ್ಲಾ, ಮೌಲ, ರಹಮತ್, ನಜೀರ್, ನಾಸೀರ್, ಜಮಾಯತ್ನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವನಹಳ್ಳಿ:</strong> ಸಾಮರಸ್ಯದ ತತ್ವದಡಿಯಲ್ಲಿ ಪಟ್ಟಣದ ಕದ್ದೂಸ್ ಬಡಾವಣೆಯಲ್ಲಿರುವ ಅಮಿನ ಮಸೀದಿಯಲ್ಲಿ ರಂಜಾನ್ ಮಾಸದ ಪ್ರಯುಕ್ತ ಇಫ್ತಾರ್ ಕೂಟವನ್ನು ಎಲ್ಲ ಧರ್ಮದ ಜನರಿಗೆ ಮಂಗಳವಾರ ಏರ್ಪಡಿಸಲಾಗಿತ್ತು.</p>.<p>ಇಫ್ತಾರ್ ಕೂಟಕ್ಕೆ ಚಾಲನೆ ನೀಡಿದ ಮಸೀದಿಯ ಅಧ್ಯಕ್ಷ ಕುದ್ದೂಸ್ ಪಾಷ ಮಾತನಾಡಿ, ರಂಜಾನ್ ಹಬ್ಬವು ಬಹಳ ಪವಿತ್ರದಿಂದ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗಿದೆ. ನೆರೆಹೊರೆಯವರೆಲ್ಲರೂ ಒಗ್ಗೂಡಿ ಯಾವುದೇ ಭೇದಭಾವವಿಲ್ಲದೆ ಕಾರ್ಯಕ್ರಮವನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.</p>.<p>ಮುಸ್ಲಿಂ ಮಹಿಳೆಯರು ಇಲ್ಲಿನ ಅಮೀನ ಮಸೀದಿಯಲ್ಲಿ ಪ್ರಾರ್ಥನೆಗೆ ಬರುತ್ತಿದ್ದು, ಜತೆಗೆ ಅನ್ಯಧರ್ಮಿಯರು ಸಹ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.</p>.<p>ಸಾಮೂಹಿಕ ಇಫ್ತಾರ್ ಕೂಟದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಲ್ಲಿನ ಆವತಿ ಮಸೀದಿ, ಜಾಮೀಯ ಅಹಲೇ ಅಹದೀಸ್ ಮಸೀದಿ ಮತ್ತು ವಿನಾಯಕ ನಗರದ ಮಸೀದಿಯಲ್ಲಿಯೂ ಸಹ ಇಫ್ತಾರ್ ಏರ್ಪಡಿಸಲಾಗಿತ್ತು.</p>.<p>ಉಪನ್ಯಾಸಕ ಡಾ.ಶಫೀಕ್ ಅಹಮದ್, ಮಸೀದಿ ಕಾರ್ಯದರ್ಶಿ ಎ.ಎಸ್.ಇಬ್ರಾಹಿಂ, ಮಸೀದಿ ಇಮಾಮ್ ನದೀಮ್, ಬಾಬು, ಸೈಯದ್ಬಾಬು, ಪತ್ರಕರ್ತ ಹೈದರ್ಸಾಬ್, ಆರೀಫ್, ಅರ್ಷದ್, ಜಬೀವುಲ್ಲಾ, ಮೌಲ, ರಹಮತ್, ನಜೀರ್, ನಾಸೀರ್, ಜಮಾಯತ್ನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>