ದೇವನಹಳ್ಳಿ: ನಕಲಿ ಪಾಸ್ಪೋರ್ಟ್ ಮೂಲಕ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿ ಮಾರ್ಗವಾಗಿ ಖಜಿಕಿಸ್ತಾನಿನ ಅಲ್ಮೇಟಿಗೆ ಪ್ರಯಾಣಿಸಲು ಆಗಮಿಸಿದ್ದ ಪ್ರಯಾಣಿಕನನ್ನು ಇಂಡಿಗೋ ಏರ್ಲೈನ್ಸ್ ಸಿಬ್ಬಂದಿ ಪತ್ತೆ ಹಚ್ಚಿದ್ದು, ಆತನನ್ನು ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.
ಶ್ರೇಯಸ್ ರಮಾನಂದ ಬಂಧಿತ ಆರೋಪಿ.
ಆರೋಪಿ ಫೆ.12ರಂದು ಅಲ್ಮೇಟಿಗೆ ಪ್ರಯಾಣಿಸಲು ಬಂದಿದ್ದ ಆರೋಪಿಯು ಪಾಸ್ಪೋರ್ಟ್ ಪರಿಶೀಲಿಸಿದ ವೇಳೆ ದಾಖಲೆಯಲ್ಲಿರುವ ಭಾವಚಿತ್ರ ಹಾಗೂ ಆತನಿಗೆ ಹೋಲಿಕೆ ಆಗದ ಕಾರಣ ಅನುಮಾನಗೊಂಡು ವಿಮಾನ ಸಿಬ್ಬಂದಿಯೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆರೋಪಿಯು ರಮಾನಂದ ಮತಿಗೋಡು ಸತ್ಯನಾರಾಯಣ ಎಂಬುವವರ ಪಾಸ್ಪೋರ್ಟ್ ಬಳಸಿಕೊಂಡು ವಿದೇಶಕ್ಕೆ ಹೋಗಲು ಯತ್ನಿಸಿದ್ದ ಎಂದು ಪರಿಶೀಲನೆ ವೇಳೆ ತಿಳಿದು ಬಂದಿದೆ.
ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.