ತಹಶೀಲ್ದಾರ್ ಹುದ್ದೆಗೆ ಮೂವರು ಅಧಿಕಾರಿಗಳು
ದೇವನಹಳ್ಳಿ ತಹಶೀಲ್ದಾರ್ ಶಿವರಾಜ್ರನ್ನು ಸರ್ಕಾರ ವರ್ಗಾವಣೆ ಮಾಡಿದ ಆದೇಶ ಹೊರಬರುತ್ತಿದ್ದಂತೆ ಜಿಲ್ಲಾಧಿಕಾರಿ ಕಚೇರಿ ಸಹಾಯಕರಾಗಿದ್ದ ಎಚ್.ಬಾಲಕೃಷ್ಣರನ್ನು ತರಾತುರಿಯಲ್ಲಿ ದೇವನಹಳ್ಳಿಯ ತಹಶೀಲ್ಧಾರ್ ಕಚೇರಿಗೆ ಬಂದು ಅಧಿಕಾರ ಸ್ವೀಕಾರ ಮಾಡಿದ್ದರು. ಸರ್ಕಾರದಿಂದ ಅಮಾನತ್ತು ಆದೇಶ ಹೊರಬಂದಾಗಲೂ ಸೋಮವಾರ ಮಧ್ಯಾಹ್ನ ತಹಶೀಲ್ದಾರ್ ಕಚೇರಿಗೆ ಬಂದ ಎಚ್.ಬಾಲಕೃಷ್ಣ ಅವರು ಮತ್ತೊಮ್ಮೆ ಅಧಿಕಾರ ಸ್ವೀಕಾರಕ್ಕೆ ಯತ್ನಿಸಿದ್ದರು. ಆದರೆ ಮಂಗಳವಾರ ದೊಡ್ಡಬಳ್ಳಾಪುರ ತಹಶೀಲ್ದಾರ್ ವಿದ್ಯಾವಿಭಾ ರಾಥೋಡ್ ಪ್ರಭಾರವಾಗಿ ದೇವನಹಳ್ಳಿ ತಹಶೀಲ್ದಾರ್ ಆಗಿ ಅಧಿಕಾರವಹಿಸಿಕೊಂಡರು ಇದೀಗಾ ಕೋರ್ಟ್ ತಡೆಯಜ್ಞೆ ತಂದು ಶಿವರಾಜ್ ಅವರೇ ತಹಶೀಲ್ದಾರ್ ಆಗಿ ಮುಂದುವರೆಯಲಿದ್ದಾರೆ.