ದೇವನಹಳ್ಳಿ: ತಹಶಿಲ್ದಾರ್ ಹಾಗೂ ದಂಡಾಧಿಕಾರಿಯಾಗಿದ್ದ ಶಿವರಾಜ್ ಅವರ ಮನೆಯ ಮೇಲೆ ಗುರುವಾರ ಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
ಪಟ್ಟಣದ ಹೊರ ವಲಯದಲ್ಲಿರುವ ಓಜೋನ್ ಆರ್ಬನಾ ಟೌನ್ ಶಿಪ್ನಲ್ಲಿರುವ ಅವರ ನಿವಾಸದ ಮೇಲೆ ದಾಳಿ ಮಾಡಿರುವ ಲೋಕಾಯುಕ್ತರು, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೇ ವರ್ಗಾವಣೆಗೊಂಡಿದ್ದ ಶಿವರಾಜ್ ಅವರು, ಸರ್ಕಾರದ ವರ್ಗಾವಣೆ ಆದೇಶ ಪ್ರಶ್ನಿಸಿ ಕೆಎಟಿಗೆ ಮೇಲ್ಮನವಿ ಸಲ್ಲಿಸಿ, ದೇವನಹಳ್ಳಿಯಲ್ಲಿಯೇ ತಹಶಿಲ್ದಾರ್ ಆಗಿ ಮುಂದುವರೆದಿದ್ದರು.
ಕೆಲವು ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ.