‘ಇಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಹಕ್ಕುಪತ್ರ ನೀಡಲಾಗಿದೆ. ಪಂಚಾಯಿತಿಯಲ್ಲಿ ಖಾತೆ ಮಾಡಿಸಿಕೊಂಡು, ಅನುದಾನ ಪಡೆದು ಮನೆ ಕಟ್ಟಿಕೊಂಡಿದ್ದೇವೆ. ಇದು ರಾಜಕಾಲುವೆಯೂ ಅಲ್ಲ, ನೀರಿನ ಹಳ್ಳವೂ ಅಲ್ಲ. ಇದೇ ಸರ್ವೆ ನಂ.30ರಲ್ಲಿ ಹೆಚ್ಚು ಮನೆಗಳಿವೆ. ಉದ್ದೇಶ ಪೂರ್ವಕವಾಗಿ ನಮ್ಮ ಮನೆಗಳನ್ನು ತೆರವುಗೊಳಿಸಲು ಹುನ್ನಾರ ನಡೆಸಲಾಗಿದೆ. ಆದ್ದರಿಂದ ತೆರವುಗೊಳಿಸುವ ಆದೇಶ ಮರುಪರಿಶೀಲಿಸಬೇಕೆಂದು‘ನಿವಾಸಿಗಳು ಮನವಿ ಮಾಡಿದರು.