‘ಹಿಪ್ಪು ನೇರಳೆ ಸೊಪ್ಪಿನ ತೋಟ ಉತ್ತಮವಾಗಿ ಬೆಳೆದಿದೆ. ಈಗಾಗಲೇ ರೈತ ಸೊಪ್ಪು ಮಾರಾಟ ಮಾಡಿದ್ದಾರೆ. ಸಾಲುಕಡ್ಡಿ ಪದ್ಧತಿ ಅಳವಡಿಸುವುದಕ್ಕಿಂತ ಮರಕಡ್ಡಿ ಪದ್ಧತಿಯಲ್ಲಿ ಬೆಳೆಸಿದರೆ ಒಂದೆರಡು ವರ್ಷ ಕಡಿಮೆ ಬೆಳೆಯಾದರೂ ನಂತರ ಉತ್ತಮ ಬೆಳೆಯಾಗಲಿದೆ. ನೀರಿನ ಮಿತ ಬಳಕೆಗೂ ಅನುಕೂಲವಾಗಲಿದೆ’ ಎಂದು ಹೇಳಿದರು. ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ, ರೇಷ್ಮೆ ಬೆಳೆ ತಾಂತ್ರಿಕ ವಿಸ್ತರಣಾಧಿಕಾರಿ ಶ್ರೀನಿವಾಸ್, ರೇಷ್ಮೆ ಇಲಾಖೆ ವಲಯ ಅಧಿಕಾರಿ ಮುನಿರಾಜು, ರೈತ ಚಿಕ್ಕೇಗೌಡ ಇದ್ದರು.