ಜಾತ್ರೆ ಮುನಿದ್ಯಾವರ ಬಂಡಿದ್ಯಾವರ ಬಂದಾಗ ಮಾತ್ರ ಬೇಡಿಕೆ ಇರುತ್ತದೆ. ಆ ಸಮಯದಲ್ಲಿ ಮನೆಯವರೆಲ್ಲರಿಗೂ ಕೆಲಸವಿರುತ್ತದೆ. ಹೂವಿನ ಬುಟ್ಟಿಗಳನ್ನು ಮೊದಲೇ ತಯಾರು ಮಾಡಿ ಇಡುವುದಕ್ಕೆ ಆಗುವುದಿಲ್ಲ. ಆ ದಿನದಲ್ಲೇ ತಯಾರಿಸಿ ಅದೇ ದಿನ ಮಾರಾಟ ಮಾಡುತ್ತೇವೆ.
ಶ್ರೀನಿವಾಸ್ ಹೂವಿನ ವ್ಯಾಪಾರಿ
ಪ್ರತಿಷ್ಠೆಗಾಗಿ ಖರ್ಚು
ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಮುನಿದ್ಯಾವರ ಬಂಡಿದ್ಯಾವರ ಮಾರಿ ಹಬ್ಬ ಕರಗ ಮಹೋತ್ಸವ ಸೇರಿದಂತೆ ಜಾತ್ರೆಯಲ್ಲಿ ತಂಬಿಟ್ಟಿನ ದೀಪದ ಮೆರವಣಿಗೆ ಪ್ರಮುಖ ಆಕರ್ಷಣೆಯಾಗಿರುತ್ತದೆ. ತಂಬಿಟ್ಟಿನ ದೀಪವನ್ನು ಹೂವಿನ ಬುಟ್ಟಿ ಇರಿಸಿಕೊಂಡು ಮಹಿಳೆಯರು ತಲೆ ಮೇಲೆ ಹೊತ್ತು ಸಾಗುವುದನ್ನು ನೋಡುವುದೇ ಒಂದು ಸೊಗಸು. ಮೆರವಣಿಗೆಯಲ್ಲಿ ಆಕರ್ಷಕವಾದ ಹೂವಿನ ಬುಟ್ಟಿ ಹೊತ್ತು ಸಾಗುವುದನ್ನು ಈ ಭಾಗದಲ್ಲಿ ಪ್ರತಿಷ್ಠೆಯಾಗಿ ಪರಿಗಣಿಸುತ್ತಾರೆ. ಹೀಗಾಗಿ ಹೂವಿನ ಬುಟ್ಟಿಗಾಗಿ ₹50000ದ ವರೆಗೂ ಖರ್ಚು ಮಾಡುತ್ತಾರೆ.