‘ಗ್ರಾಮದಲ್ಲಿ ಸ್ವಚ್ಛತೆ, ಆರೋಗ್ಯ ಮತ್ತು ಪರಿಸರದ ಜಾಗೃತಿ, ಅನಕ್ಷರಸ್ಥರಿಗೆ ಅಕ್ಷರ ಜ್ಞಾನ, ಕೃಷಿ ಮತ್ತು ತೋಟಗಾರಿಕೆಯಲ್ಲಿ ರೈತರ ಸಂಕಷ್ಟಗಳು, ಶುದ್ಧ ಕುಡಿಯುವ ನೀರಿನ ಮಹತ್ವ, ಸ್ಥಳೀಯ ಕಲೆ ಮತ್ತು ಸಂಸ್ಕೃತಿ, ಗ್ರಾಮೀಣ ಸೊಗಡಿನ ಪರಿಪೂರ್ಣ ಚಿತ್ರಣವನ್ನು ಅರಿತು ಅವುಗಳನ್ನು ಸ್ಥಳೀಯರಿಗೆ ತಿಳಿಸಿಕೊಟ್ಟಿರುವುದು ಸ್ಥಳೀಯರಿಗೆ ವಿವಿಧ ರೀತಿಯ ಅನುಕೂಲವಾಗಿದೆ. ಜೊತೆಗೆ ನಿಮಗೂ ಅರ್ಥವಾಗಿದೆ. ಇಂತಹ ಶಿಬಿರಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ನಡೆಯಬೇಕು’ ಎಂದು ಹೇಳಿದರು.