ವಿದೇಶಿ ಮಹಿಳೆ ನೀಡಿರುವ ಮಾಹಿತಿಯಂತೆ ‘5 ದಿನಗಳ ಹಿಂದೆ ದೆಹಲಿಯಿಂದ ಬೆಂಗಳೂರಿಗೆ ಮೂತ್ರಪಿಂಡದ ಚಿಕಿತ್ಸೆ ಪಡೆಯಲು ನನ್ನ ಪತಿಯ ಸೂಚನೆ ಮೇರೆಗೆ ಬಂದಿದ್ದು, ಬೆಂಗಳೂರಿನ ಚಿಕಿತ್ಸೆ ಪಡೆಯುತ್ತಿದ್ದೆ. ಈ ಸಂದರ್ಭದಲ್ಲಿ ನನ್ನ ಪತಿ ತುರ್ತು ಕೆಲಸ ನಿಮಿತ್ತ ಸ್ವದೇಶಕ್ಕೆ ಹೋಗುವಾಗ ನೈಜಿರಿಯಾದ ಒಬ್ಬಾಕೆಯನ್ನು ಪರಿಚಯಿಸಿ ಇವರ ಜೊತೆ ಇರುವಂತೆ ತಿಳಿಸಿ ಹೋಗಿದ್ದರು. ಜ.16ರಂದು ರಾತ್ರಿ 10 ಗಂಟೆ ಸಮಯದಲ್ಲಿ ಬೆಂಗಳೂರಿನ ಕಮ್ಮನಹಳ್ಳಿ ಬಳಿಯ ಒಂದು ರೆಸ್ಟೋರೆಂಟ್ನಲ್ಲಿ ಊಟ ಮುಗಿಸಿ ಬೆಂಗಳೂರಿನ ನವಜ್ಯೋತಿ ಸ್ಟ್ರಿಟ್ಗೆ ಹೋಗಲು ಕ್ಯಾಬ್ ಬುಕ್ ಮಾಡಿಕೊಂಡು ಹೊರಟೆ. ಸುಮಾರು ಐದಾರು ಕಿ.ಮೀ ದೂರು ಹೋಗುತ್ತಿದ್ದಂತೆ ಕ್ಯಾಬ್ ಚಾಲಕ ದಾರಿ ಮಧ್ಯೆ ಕ್ಯಾಬ್ ನಿಲ್ಲಿಸಿ ಮತ್ತೆ ಮೂರು ಜನರನ್ನು ಕಾರಿಗೆ ಹತ್ತಿಸಿಕೊಂಡ. ಕಾರಿನಲ್ಲಿದ್ದ ಮೂವರು ಜನ ಅಪರಿಚಿತರು ಚಾಕು ತೋರಿಸಿ ಕುತ್ತಿಗೆ ಹಿಡಿದುಕೊಂಡು ಎಳೆದಾಡಿ ಮೊಬೈಲ್, ಹಣದ ಪರ್ಸ್, ಚಿನ್ನಾಭರಣ ಕಿತ್ತುಕೊಂಡು ಮೈ ಮೇಲಿನ ಬಟ್ಟೆಯನ್ನು ಬಿಚ್ಚಿ, ಬರಿ ಮೈಯಲ್ಲಿ ಬಿಟ್ಟು ಹೋಗಿದ್ದಾರೆ’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ದಾಖಲಾಗಿದೆ. ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.