ಆದರೆ, ಬೇಡಿಕೆಯೂ ಕಡಿಮೆ ಇರುವುದರಿಂದ ವಂಶ ಪಾರಂಪರ್ಯವಾಗಿ ಮಾಡಿಕೊಂಡು ಬಂದ ಕಸಬನ್ನು ಬಿಟ್ಟು, ನಗರದತ್ತ ಕುಂಬಾರರು ವಲಸೆ ಹೋಗುತ್ತಿದ್ದಾರೆ. ಹಳ್ಳಿಗಳಲ್ಲಿ ಮಡಿಕೆ ತಯಾರಿಕೆ ಕೆಲಸವೂ ಸ್ಥಗಿತಗೊಂಡ ಮೇಲೆ ಕಸುಬುದಾರಿಕೆಯನ್ನು ಸಾಕಷ್ಟು ಜನರು ಮರೆತು ಹೋಗಿದ್ದಾರೆ. ಇಂತಹ ಸ್ಥಿತಿಯಲ್ಲಿಯೂ ಚಿನ್ನಂಡಹಳ್ಳಿ ಮತ್ತು ಬಾಣಮಾಕನಹಳ್ಳಿ ಕುಂಬಾರರು ಪೂರ್ವಿಕರ ಕಸಬನ್ನು ಮುಂದುವರೆಸಿಕೊಂಡು ಬಂದಿದ್ದಾರೆ.