ಭೀಮ್ ಸೇವಾ ಸಮಿತಿ ಅಧ್ಯಕ್ಷ ಶ್ರೀಕಾಂತ್ ರಾವಣ್ ಮಾತನಾಡಿ, ‘ಬಡ ದಲಿತ ಕುಟುಂಬಗಳಿಗೆ ಆಗುತ್ತಿರುವ ಅನ್ಯಾಯ ಸಹಿಸಲಾಗದು. ಕಳೆದ ಮೂರ್ನಾಲ್ಕು ತಿಂಗಳಿನಿಂದ ಅದೇ ಗ್ರಾಮದ ಮೇಲ್ವರ್ಗದ ರಾಜಕೀಯವಾಗಿ ಬಲಿಷ್ಟವಾದ ವ್ಯಕ್ತಿ ತನ್ನ ಮಗನ ಆಸ್ಪತ್ರೆ ನಿರ್ಮಿಸಲು ದಲಿತರು ವಾಸ ಮಾಡುತ್ತಿರುವ ಮನೆ ಖಾಲಿ ಮಾಡುವಂತೆ ಒತ್ತಾಯ ಮಾಡಿ ಕೊಲೆ ಬೆದರಿಕೆ ಹಾಕುತ್ತಿರುವುದು ಖಂಡನೀಯ’ ಎಂದರು.