ತಾಲ್ಲೂಕಿನ ಅಭಿವೃದ್ಧಿಗೆ ಸದ್ಯ ₹3 ಸಾವಿರ ಕೋಟಿಯಷ್ಟು ಅನುದಾನ ಅಗತ್ಯತೆ ಇದೆ. ಈ ಸಂಬಂದ ಮುಂದಿನ ದಿನಗಳಲ್ಲಿ ಕರಡು ಪ್ರತಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಹಂತ ಹಂತವಾಗಿ ಅನುದಾನ ಬಂದರೂ ಅಭಿವೃದ್ಧಿ ಕೆಲಸಗಳಿಗೆ ಬಳಸಲು ನೆರವಾಗುತ್ತದೆ
ಶರತ್ ಬಚ್ಚೇಗೌಡ, ಶಾಸಕ
ಡಿಪೊ ಸ್ಥಾಪನೆಗೆ ಕ್ರಮ
ಗ್ರಾಮಗಳಿಗೆ ಸಾರಿಗೆ ಕಲ್ಪಿಸಲು ಈಗಾಗಲೆ ಎರಡು ಇಲೆಕ್ಟ್ರಿಕ್ ಬಸ್ ಅನ್ನು ಸರ್ಕಾರ ಮಂಜೂರು ಮಾಡಿದೆ. ನಂದಗುಡಿ ಹಾಗೂ ಅನುಗೊಂಡನಹಳ್ಳಿ ಭಾಗದಲ್ಲಿ ಒಂದು ಘಟಕ ಸ್ಥಾಪನೆಗೆ ಕನಿಷ್ಠ 5 ಎಕರೆ ಸರ್ಕಾರಿ ಜಾಗದ ಅವಶ್ಯಕತೆ ಇದ್ದು ಕಂದಾಯ ಇಲಾಖೆಗೆ ಗಮನಕ್ಕೆ ತರಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.