ಹೊಸಕೋಟೆ: ಹೊಸಕೋಟೆಗೆ ಮೆಟ್ರೊ ತರಲು ಡಿಪಿಆರ್ ತಯಾರಿಸಲು ಆದೇಶಿಸಲಾಗುವುದು. ಹೊಸಕೋಟೆ ಬೆಂಗಳೂರಿನ ಹೆಬ್ಬಾಗಿಲು, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ದೇವನಹಳ್ಳಿ, ನೆಲಮಂಗಲ ನಾವೆಲ್ಲರೂ ಬೆಂಗಳೂರಿನವರು. ಮುಂದಿನ ದಿನಗಳಲ್ಲಿ ಬೆಂಗಳೂರಿನ ಜನರಿಗೆ ಏನ ಸಿಗುತ್ತದೆಯೋ ಅದು ನಿಮ್ಮಲ್ಲರಿಗೂ ಸಿಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುವ ಮೂಲಕ ಹೊಸಕೋಟೆಯನ್ನು ಬಿಬಿಎಂಪಿಗೆ ಸೇರಿಸುವ ಸುಳಿವು ನೀಡಿದರು.