ಜನರಿಗೆ ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಪ್ರಕಾರ ಹತ್ತು ಕೆ.ಜಿ ಅಕ್ಕಿ ನೀಡಲು ರಾಜ್ಯ ಸರ್ಕಾರ ಕಂಕಣ ಬದ್ಧವಾಗಿದೆ. ಏಕಾಏಕಿ ನಿಯಮಗಳನ್ನು ಗಾಳಿಗೆ ತೂರಿ ಅಕ್ಕಿ ಖರೀದಿಸಲು ಸಾಧ್ಯವಿಲ್ಲ. ಟೆಂಡರ್ ಕರೆದು ನಿಯಮಾನುಸಾರ ಅಕ್ಕಿಯನ್ನು ರಾಜ್ಯಕ್ಕೆ ಆಮದು ಮಾಡಿಕೊಳ್ಳುತ್ತೇವೆ. ಈಗಾಗಲೇ, ಎನ್ಸಿಸಿಎಫ್, ಕೇಂದ್ರಿಯ ಭಂಡಾರ್, ನಾಫೆಡ್ ಸಂಸ್ಥೆಗಳಿಗೆ ಅಕ್ಕಿ ಪೂರೈಸಲುಗೆ ಮನವಿ ಮಾಡಿದ್ದೇವೆ ಎಂದರು.