<p><strong>ವಿಜಯಪುರ: </strong>ಇಲ್ಲಿನ ಶಿಡ್ಲಘಟ್ಟ ರಸ್ತೆಯಲ್ಲಿರುವ ದಿವ್ಯ ಯೇಸುಬಾಲರ ದೇವಾಲಯದಲ್ಲಿ ಭಾನುವಾರ ವಾರ್ಷಿಕ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ನಡೆಯಿತು.</p>.<p>ಜಪಸರ, ಪಾಪನಿವೇದನೆ, ಧ್ವಜಾರೋಹಣ, ದಿವ್ಯಬಲಿಪೂಜೆ ಕಾರ್ಯಕ್ರಮವನ್ನು ಧರ್ಮಕೇಂದ್ರದ ಗುರು ಸ್ವಾಮಿ ಬಾಲರಾಜ್ ನಡೆಸಿಕೊಟ್ಟರು. ಮಧ್ಯಾಹ್ನ 3ಕ್ಕೆ ಆಡಂಬರ ಗಾಯನ ಬಲಿಪೂಜೆ ಆಯೋಜಿಸಲಾಗಿತ್ತು. ಸಂಜೆ 5ಕ್ಕೆ ಬಾಲಯೇಸು ಪುತ್ಥಳಿ ಮೆರವಣಿಗೆ ನಡೆಯಿತು.</p>.<p>ಚಂಡೆ ವಾದ್ಯಗಳೊಂದಿಗೆ ಕೆಂಪು ಮತ್ತು ಶ್ವೇತ ವಸ್ತ್ರದಾರಿಗಳಾಗಿದ್ದ ಮಕ್ಕಳು ಶಿಲುಬೆ ಹಿಡಿದು ಸಾಗಿದರು. ಭಕ್ತರು ಅವರನ್ನು ಹಿಂಬಾಲಿಸಿದರು.</p>.<p>ಧರ್ಮಗುರು ಸ್ವಾಮಿ ಚಾಕೋ ಮಾತನಾಡಿ, ಎಲ್ಲರು ಪ್ರೀತಿ –ವಿಶ್ವಾಸದಿಂದ ಬಾಳ್ವೆ ನಡೆಸಬೇಕಾಗಿದೆ. ಇದನ್ನು ಅರಿತರೆ ಬದುಕಿನಲ್ಲಿ ಸುಖವಿದೆ ಎಂದು ಹೇಳಿದರು.</p>.<p>ಧರ್ಮಗುರು ಮ್ಯಾಥ್ಯೂ ನ್ಯಾಯರ್ ಕುಳಂ ಮಾತನಾಡಿ, ಪ್ರತಿಯೊಬ್ಬರೂ ದೇವರ ಮಾರ್ಗದಲ್ಲಿ ಸಾಗಬೇಕಾಗಿದೆ. ಸ್ವಾರ್ಥ ಚಿಂತನೆ ಬಿಟ್ಟು ಪರಸ್ಪರ ನಂಬಿಕೆ, ವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ಇಲ್ಲಿನ ಶಿಡ್ಲಘಟ್ಟ ರಸ್ತೆಯಲ್ಲಿರುವ ದಿವ್ಯ ಯೇಸುಬಾಲರ ದೇವಾಲಯದಲ್ಲಿ ಭಾನುವಾರ ವಾರ್ಷಿಕ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ನಡೆಯಿತು.</p>.<p>ಜಪಸರ, ಪಾಪನಿವೇದನೆ, ಧ್ವಜಾರೋಹಣ, ದಿವ್ಯಬಲಿಪೂಜೆ ಕಾರ್ಯಕ್ರಮವನ್ನು ಧರ್ಮಕೇಂದ್ರದ ಗುರು ಸ್ವಾಮಿ ಬಾಲರಾಜ್ ನಡೆಸಿಕೊಟ್ಟರು. ಮಧ್ಯಾಹ್ನ 3ಕ್ಕೆ ಆಡಂಬರ ಗಾಯನ ಬಲಿಪೂಜೆ ಆಯೋಜಿಸಲಾಗಿತ್ತು. ಸಂಜೆ 5ಕ್ಕೆ ಬಾಲಯೇಸು ಪುತ್ಥಳಿ ಮೆರವಣಿಗೆ ನಡೆಯಿತು.</p>.<p>ಚಂಡೆ ವಾದ್ಯಗಳೊಂದಿಗೆ ಕೆಂಪು ಮತ್ತು ಶ್ವೇತ ವಸ್ತ್ರದಾರಿಗಳಾಗಿದ್ದ ಮಕ್ಕಳು ಶಿಲುಬೆ ಹಿಡಿದು ಸಾಗಿದರು. ಭಕ್ತರು ಅವರನ್ನು ಹಿಂಬಾಲಿಸಿದರು.</p>.<p>ಧರ್ಮಗುರು ಸ್ವಾಮಿ ಚಾಕೋ ಮಾತನಾಡಿ, ಎಲ್ಲರು ಪ್ರೀತಿ –ವಿಶ್ವಾಸದಿಂದ ಬಾಳ್ವೆ ನಡೆಸಬೇಕಾಗಿದೆ. ಇದನ್ನು ಅರಿತರೆ ಬದುಕಿನಲ್ಲಿ ಸುಖವಿದೆ ಎಂದು ಹೇಳಿದರು.</p>.<p>ಧರ್ಮಗುರು ಮ್ಯಾಥ್ಯೂ ನ್ಯಾಯರ್ ಕುಳಂ ಮಾತನಾಡಿ, ಪ್ರತಿಯೊಬ್ಬರೂ ದೇವರ ಮಾರ್ಗದಲ್ಲಿ ಸಾಗಬೇಕಾಗಿದೆ. ಸ್ವಾರ್ಥ ಚಿಂತನೆ ಬಿಟ್ಟು ಪರಸ್ಪರ ನಂಬಿಕೆ, ವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>