ಪುಣ್ಯಹ, ಸ್ಥಳಶುದ್ಧ, ಕಳಸ ಸ್ಥಾಪನೆ ವೇದಾರ್ಚನೆ, ಮೂಲದೇವರಿಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ನಡೆಯಿತು. ಚಂಡಿಕಾ ಪಾರಾಯಣ, ಅಗ್ನಿಪ್ರತಿಷ್ಠೆ, ಗಣಪತಿ ಹೋಮ, ನವಗ್ರಹ ಮಹಾಚಂಡಿಕಾ ಹೋಮದಲ್ಲಿ ಭಕ್ತರು ಭಾಗಿಯಾದರು. ರೇಷ್ಮೆ ವಸ್ತ್ರ, ತುಪ್ಪ, ಕೊಬ್ಬರಿ ಬಟ್ಟಲು, ಪಂಚಫಲ, ದ್ರಾಕ್ಷಿ, ಗೋಡಂಬಿ, ಕಲ್ಲು ಸಕ್ಕರೆ, ಬಾದಾಮಿ, ಭತ್ತ ಪೂರ್ಣಾಹುತಿಗೆ ಸಮರ್ಪಿಸಲಾಯಿತು.