<p><strong>ಆನೇಕಲ್: </strong>ತಾಲ್ಲೂಕಿನ ಬಿದರಗುಪ್ಪೆಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು.</p>.<p>ಕೆಂಪೇಗೌಡರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ ರಾಜ್ಯ ಒಕ್ಕಲಿಗರ ಜಾಗೃತಿ ಸಂಘದ ರಾಜ್ಯ ಅಧ್ಯಕ್ಷ ಮುನಿರಾಜು ಗೌಡ, ಕೆಂಪೇಗೌಡರು ಸರ್ವರಿಗೂ ಸಮಪಾಲು ಮತ್ತು ಸಮಬಾಳು ತತ್ವದ ಅಡಿ ಆಳ್ವಿಕೆ ನಡೆಸಿದ ದೊರೆ ಮತ್ತು ಸಮರ್ಥ ಆಡಳಿತಗಾರ ಎಂದರು.</p>.<p>ಕೆಂಪೇಗೌಡರು ದೂರದೃಷ್ಠಿಯ ನಾಯಕರಾಗಿದ್ದರು. ಉದ್ಯಾನವನಗಳು, ಸುಸಜ್ಜಿತ ಮಾರುಕಟ್ಟೆ, ಅತ್ಭುತ ನಗರಗಳನ್ನು ನಿರ್ಮಿಸುವ ಮೂಲಕ ನಗರ ಯೋಜನೆಯಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಕೆಂಪೇಗೌಡರುಕಟ್ಟಿಸಿದ ಕೆರೆಗಳ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದರು.</p>.<p>ಅತ್ತಿಬೆಲೆ ಪೊಲೀಸ್ ಇನ್ಸ್ಪೆಕ್ಟರ್ ರಾಘವೇಂದ್ರ, ಬಿ.ಆರ್.ಮೂರ್ತಿ, ಬಿದರಗುಪ್ಪೆ ರಾಜೇಶ್, ವಿಜಯ್ ಶ್ರೀರಾಮಯ್ಯ, ಚೆನ್ನಪ್ಪ, ನರೇಂದ್ರ ಬಾಬು, ಶಂಕರರೆಡ್ಡಿ, ಶಿವಕುಮಾರ್, ಕೃಷ್ಣಮೂರ್ತಿ, ಮೋಹನ್, ರಾಮಮೂರ್ತಿ, ತಿಮ್ಮರಾಯಪ್ಪ, ಆನಂದ್, ಮಂಜುನಾಥ್, ಪಾಪುಪತಿ, ಮಂಜುನಾಥ್, ನಾಗೇಶ್, ಮುರಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ತಾಲ್ಲೂಕಿನ ಬಿದರಗುಪ್ಪೆಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು.</p>.<p>ಕೆಂಪೇಗೌಡರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ ರಾಜ್ಯ ಒಕ್ಕಲಿಗರ ಜಾಗೃತಿ ಸಂಘದ ರಾಜ್ಯ ಅಧ್ಯಕ್ಷ ಮುನಿರಾಜು ಗೌಡ, ಕೆಂಪೇಗೌಡರು ಸರ್ವರಿಗೂ ಸಮಪಾಲು ಮತ್ತು ಸಮಬಾಳು ತತ್ವದ ಅಡಿ ಆಳ್ವಿಕೆ ನಡೆಸಿದ ದೊರೆ ಮತ್ತು ಸಮರ್ಥ ಆಡಳಿತಗಾರ ಎಂದರು.</p>.<p>ಕೆಂಪೇಗೌಡರು ದೂರದೃಷ್ಠಿಯ ನಾಯಕರಾಗಿದ್ದರು. ಉದ್ಯಾನವನಗಳು, ಸುಸಜ್ಜಿತ ಮಾರುಕಟ್ಟೆ, ಅತ್ಭುತ ನಗರಗಳನ್ನು ನಿರ್ಮಿಸುವ ಮೂಲಕ ನಗರ ಯೋಜನೆಯಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಕೆಂಪೇಗೌಡರುಕಟ್ಟಿಸಿದ ಕೆರೆಗಳ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದರು.</p>.<p>ಅತ್ತಿಬೆಲೆ ಪೊಲೀಸ್ ಇನ್ಸ್ಪೆಕ್ಟರ್ ರಾಘವೇಂದ್ರ, ಬಿ.ಆರ್.ಮೂರ್ತಿ, ಬಿದರಗುಪ್ಪೆ ರಾಜೇಶ್, ವಿಜಯ್ ಶ್ರೀರಾಮಯ್ಯ, ಚೆನ್ನಪ್ಪ, ನರೇಂದ್ರ ಬಾಬು, ಶಂಕರರೆಡ್ಡಿ, ಶಿವಕುಮಾರ್, ಕೃಷ್ಣಮೂರ್ತಿ, ಮೋಹನ್, ರಾಮಮೂರ್ತಿ, ತಿಮ್ಮರಾಯಪ್ಪ, ಆನಂದ್, ಮಂಜುನಾಥ್, ಪಾಪುಪತಿ, ಮಂಜುನಾಥ್, ನಾಗೇಶ್, ಮುರಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>