ಸ್ಥಳದ ಬಗ್ಗೆ ಗೊಂದಲ: ಕೆಂಪೇಗೌಡ ಪಿಒಪಿ ಪ್ರತಿಮೆ ಸ್ಥಾಪಿಸಿರುವ ಜಾಗ ಹೆದ್ದಾರಿಗೆ ಸೇರುತ್ತದೋ, ಇಲ್ಲವೊ ಎನ್ನವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ವರದಿಯ ನಂತರ ಮುಂದಿನ ಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದುಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮುನಿಕೃಷ್ಣ ತಿಳಿಸಿದ್ದಾರೆ.