ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಮುಳಬಾಗಿಲು: ಮೂಲ ಸ್ವರೂಪ ಕಳೆದುಕೊಂಡ ಕೆರೆಗಳು

ರಾಜಕಾಲುವೆ ಮೇಲಿನ ಚಪ್ಪಡಿ ಕಲ್ಲುಗಳು ಅನ್ಯರ ಪಾಲು
Published : 22 ಜುಲೈ 2024, 7:24 IST
Last Updated : 22 ಜುಲೈ 2024, 7:24 IST
ಫಾಲೋ ಮಾಡಿ
Comments
ಮಲ್ಲೆಕುಪ್ಪ ಕೆರೆಯಲ್ಲಿ ಜಾಲಿ ಮರಗಳು ಪೊದೆಗಳಂತೆ ಆವರಿಸಿಕೊಂಡಿರುವುದು
ಮಲ್ಲೆಕುಪ್ಪ ಕೆರೆಯಲ್ಲಿ ಜಾಲಿ ಮರಗಳು ಪೊದೆಗಳಂತೆ ಆವರಿಸಿಕೊಂಡಿರುವುದು
ನಂಗಲಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜ ಕಾಲುವೆ ಮೇಲಿನ ಕಲ್ಲು ಚಪ್ಪಡಿಗಳು ಅನ್ಯರ ಪಾಲಾಗಿರುವುದು
ನಂಗಲಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜ ಕಾಲುವೆ ಮೇಲಿನ ಕಲ್ಲು ಚಪ್ಪಡಿಗಳು ಅನ್ಯರ ಪಾಲಾಗಿರುವುದು
ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ಗಿಡಗಂಟಿ ಒತ್ತುವರಿ ಕಸ ಕಡ್ಡಿ ತ್ಯಾಜ್ಯ ತುಂಬಿದ್ದರೆ ಕೆಲವು ಕೆರೆಗಳಂತೂ ಕೆರೆಗಳ ರೀತಿಯೇ ಕಾಣಿಸದಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೆರೆಗಳನ್ನು ಸರ್ವೆ ಮಾಡಿ ಒತ್ತುವರಿ ತೆರವು ಹಾಗೂ ಸ್ವಚ್ಚತೆಗೆ ಮಾಡಿಸಲು ಕ್ರಮ ಕೈಗೊಳ್ಳಬೇಕಾಗಿದೆ.
ಪ್ರಭಾಕರ್ ಯಲುವಹಳ್ಳಿ
ಸುಮಾರು ಕೆರೆಗಳು ಒತ್ತುವರಿಯಾಗಿರುವುದು ಗಮನಕ್ಕೆ ಬಂದಿದೆ. ಇನ್ನು ಸುಮಾರು ಕೆರೆಗಳಲ್ಲಿ ಗಿಡಗಂಟಿಗಳಿಂದ ತುಂಬಿರುವುದು ತಿಳಿದು ಬಂದಿದೆ. ಕೆರೆಗಳ ಸರ್ವೆ ಮಾಡಿ ಒತ್ತುವರಿ ತೆರವು ಮಾಡಿಸಲಾಗುವುದು
ಬಿ.ಆರ್.ಮುನಿವೆಂಕಟಪ್ಪ ಗ್ರೇಡ್ 2 ತಹಶೀಲ್ದಾರ್
ರಾಜ ಕಾಲುವೆಗಳೇ ಇಲ್ಲ
ಕೆರೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ರಾಜ ಕಾಲುವೆಗಳೇ ಇಲ್ಲವಾಗಿದೆ.  ನಂಗಲಿ ಕೆರೆಯಿಂದ ಹಾದು ಹೋಗಿರುವ ರಾಜ ಕಾಲುವೆ ಮೇಲಿನ ಕಲ್ಲು ಚಪ್ಪಡಿಗಳು ಹಲವರ ಪಾಲಾಗಿವೆ. ಬೈರಕೂರು ಕೆರೆ ರಾಜ ಕಾಲುವೆಯನ್ನು ಸ್ಥಳೀಯರೊಬ್ಬರು ಒತ್ತುವರಿ ಮಾಡಿಕೊಂಡಿಕೊಂಡಿದ್ದಾರೆ.  ಕೆರೆಗಳಲ್ಲಿ ಆಳೆತ್ತರದ ಗುಂಡಿ ನಿರ್ಮಾಣವಾಗಿ ಬಹುತೇಕ ಕೆರೆಗಳ ರೂಪವೇ ಬದಲಾಗಿದೆ ಎಂದು ಬೈರಕೂರು ಶೇಖರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT