‘ಪೋಷಕರು ಮಕ್ಕಳಿಗೆ ಶ್ರೀಕೃಷ್ಣ ರಾಧೆಯರ ವೇಷ ತೊಡಿಸುವುದಕ್ಕೆ ಮಾತ್ರ ಸೀಮಿತವಾಗಬಾರದು. ಪುರಾಣ ಪುರುಷರು, ಐತಿಹಾಸಿಕ ರಾಜರು, ರಾಷ್ಟ್ರ ನಾಯಕರು ಬೆಳೆದು ಬಂದ ರೀತಿ, ನಡವಳಿಕೆ, ಅವರ ವ್ಯಕ್ತಿತ್ವ ಮತ್ತು ಸಾಧನೆಗಳ ಬಗ್ಗೆ ಮನವರಿಕೆ ಮಾಡಬೇಕು. ಛತ್ರಪತಿ ಶಿವಾಜಿ ಮಗುವಾಗಿದ್ದಾಗ ತಾಯಿ ಜೀಜಾಬಾಯಿ ಹೇಳಿದ ರಾಮಾಯಣ, ಮಹಾಭಾರತದ ಕಥೆ ಕೇಳಿ, ಅದನ್ನೇ ಆದರ್ಶವನ್ನಾಗಿಟ್ಟುಕೊಂಡಿದ್ದ’ ಎಂದು ಹೇಳಿದರು.