ಈ ಕೇಂದ್ರದಲ್ಲಿ ಖಾಲಿ ಇದ್ದ ಕಾರ್ಯಕರ್ತೆಯರ ಹುದ್ದೆಗೆ ಕಾನೂನು ರೀತಿ ಜಿಲ್ಲಾಧಿಕಾರಿ ಅರ್ಜಿ ಕರೆದು ವಿಧವೆ ಪೂರ್ಣಿಮಾ ಎಂಬಾಕೆಯನ್ನು ನೇಮಕ ಮಾಡಿದ್ದರು. ನೇಮಕಾತಿ ಪಡೆದು ಎರಡು ದಿನ ಅಂಗನವಾಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಶುಕ್ರವಾರ ಶಿವಕುಮಾರ್, ಕಾರ್ಯಕರ್ತೆಯ ಹುದ್ದೆ ನಮ್ಮ ಕಡೆಯವರಿಗೆ ಸಿಗಬೇಕಿತ್ತು ಎಂದು ಆರೋಪಿಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ, ಕೇಂದ್ರಕ್ಕೆ ಬೀಗ ಹಾಕಿದ್ದಾರೆ ಎಂದಿದ್ದಾರೆ.