ಕಾರ್ಯಾಗಾರದಲ್ಲಿ 5 ಗೀತೆಗಳಿಗೆ ‘ಎದೆ ತುಂಬಿ ಹಾಡಿದನು’ ಖ್ಯಾತಿಯ ಸಂಗೀತ ನಿರ್ದೇಶಕ ಬಿ.ವಿ.ಶ್ರೀನಿವಾಸ ರಾಗ ಸಂಯೋಜನೆ ಮಾಡಿದರು. ಸ್ವಾಮಿ ವಿವೇಕಾನಂದ ಕನ್ನಡ ಶಾಲೆಯ 647 ಮಕ್ಕಳಿಗೆ ಏಕ ಕಾಲದಲ್ಲಿ 5 ಕವನಗಳಿಗೆ ಸಂಗೀತ ರಚನೆ ಮಾಡುವ ಮೂಲಕ ಮಕ್ಕಳಿಗೆ ಗಾಯನ ಹೇಳಿಕೊಟ್ಟರು. ಶಾಲೆಯ ಮುಖ್ಯ ಶಿಕ್ಷಕ ಡಾ.ಹುಲಿಕಲ್ ನಟರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಡಿಮಂಚೇನಹಳ್ಳಿ ಕಾಂತಪ್ಪ ಮತ್ತು ಶಶಿಕಲಾ ಕಾಂತಪ್ಪ ಭಾಗವಹಿಸಿದ್ದರು.