<p><strong>ದೇವನಹಳ್ಳಿ</strong>: ಸರ್ಕಾರದ ಬೊಕ್ಕಸಕ್ಕೆ ನಿತ್ಯ ಲಕ್ಷಾಂತರ ರೂಪಾಯಿ ವರಮಾನ ತಂದು ಕೊಂಡುವ, ರಾಜ್ಯದಲ್ಲಿ ಅತೀ ಹೆಚ್ಚು ಸ್ವತ್ತುಗಳ ನೋಂದಣಿ ನಡೆಯುವ ದೇವನಹಳ್ಳಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಮೂಲ ಸೌಕರ್ಯ ಮರೀಚಿಕೆಯಾಗಿದೆ.</p>.<p>ನಿತ್ಯ ಸಾವಿರಾರು ಜನರು ಈ ಕಚೇರಿಯಲ್ಲಿ ಸರ್ಕಾರಿ ಸೇವೆ ಪಡೆಯಲು ಆಗಮಿಸುತ್ತಾರೆ. ತಾಲ್ಲೂಕು ಕಚೇರಿ ಸಂಕೀರ್ಣದ ಮೊದಲನೇ ಮಹಡಿಯಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಗೆ ದೈಹಿಕ ಅಶಕ್ತರು, ಹಿರಿಯ ನಾಗರಿಕರು ಸೇರಿದಂತೆ ದೈಹಿಕ ನೂನ್ಯತೆ ಇರುವವರು ಹೋಗುವುದೇ ಕಷ್ಟವಾಗಿದೆ.</p>.<p>ನೋಂದಣಾಧಿಕಾರಿಗಳ ಕಚೇರಿಯಲ್ಲಿ ವೀಲ್ಹ್ಚೇರ್ ವ್ಯವಸ್ಥೆ ಇದ್ದರೂ, ಅದರ ಮೂಲಕ ಸುಲಭವಾಗಿ ಮೊದಲನೇ ಮಹಡಿ ತಲುಪದಂತಹ ದುಸ್ಥಿತಿ ಎದ್ದು ಕಾಣುತ್ತಿದೆ. ತಾಲ್ಲೂಕು ಆಡಳಿತವೂ ಅಶಕ್ತರಿಗೆ ನೆರವಾಗಲು ಲಿಫ್ಟ್ ಅಳವಡಿಸುತ್ತೇವೆ ಎಂದು ಹುಸಿ ಆಶ್ವಾಸನೆಯನ್ನು ಸಾಕಷ್ಟು ವರ್ಷಗಳಿಂದ ಹೇಳಿಕೊಂಡೇ ಬರುತ್ತಿದೆ.</p>.<p>ಯಾವುದೇ ಜಮೀನುಗಳ ವಹಿವಾಟನ್ನು ನೋಂದಣಿ ಮಾಡಿಸಲು ಬರುವವರು, ಅವರ ಕುಟುಂಬಸ್ಥರನ್ನೆಲ್ಲಾ ಕರೆತಂದು ಸಹಿ ಮಾಡಿಸುವುದು ಅನಿವಾರ್ಯವಾಗಿದೆ. ಇವರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರು, ವಯೋಸಹಜವಾಗಿ ದೈಹಿಕ ಬಲಹೀನರಾಗಿರುವವರು ಇರುತ್ತಾರೆ.</p>.<p>ಇಂತಹ ಅಶಕ್ತರನ್ನು ಉಪನೋಂದಣಾಧಿಕಾರಿಗಳ ಕಚೇರಿಗೆ ಕರೆದುಕೊಂಡು ಹೋಗಲು ಹತ್ತಾರು ಜನರು ಅವರನ್ನು ವೀಲ್ಹ್ ಚೇರ್ನಲ್ಲಿ ಕುಳ್ಳರಿಸಿ, ಮೆರವಣಿಗೆ ರೀತಿಯಲ್ಲಿ ಮೆಟ್ಟಲುಗಳ ಮೂಲಕ ಕರೆದೊಯ್ಯಬೇಕಿದೆ.</p>.<p>ಸಾಕಷ್ಟು ಸಾರ್ವಜನಿಕರು ಈ ಕುರಿತು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ, ಅಂಗವಿಕಲ ಸ್ನೇಹಿ, ಹಿರಿಯ ನಾಗರಿಕರಿಗೆ ಅನುಕೂಲವಾಗುಂತೆ ಕಚೇರಿ ಸ್ಥಳಾಂತರ ಮಾಡುವಂತೆ ಒತ್ತಾಯಿಸಿದ್ದರೂ, ಯಾವುದೇ ರೀತಿಯಲ್ಲಿ ಪರಿಹಾರ ಇಂದಿಗೂ ನಿಡುವಲ್ಲಿ ಆಡಳಿತ ವರ್ಗವೂ ಸೋತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವನಹಳ್ಳಿ</strong>: ಸರ್ಕಾರದ ಬೊಕ್ಕಸಕ್ಕೆ ನಿತ್ಯ ಲಕ್ಷಾಂತರ ರೂಪಾಯಿ ವರಮಾನ ತಂದು ಕೊಂಡುವ, ರಾಜ್ಯದಲ್ಲಿ ಅತೀ ಹೆಚ್ಚು ಸ್ವತ್ತುಗಳ ನೋಂದಣಿ ನಡೆಯುವ ದೇವನಹಳ್ಳಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಮೂಲ ಸೌಕರ್ಯ ಮರೀಚಿಕೆಯಾಗಿದೆ.</p>.<p>ನಿತ್ಯ ಸಾವಿರಾರು ಜನರು ಈ ಕಚೇರಿಯಲ್ಲಿ ಸರ್ಕಾರಿ ಸೇವೆ ಪಡೆಯಲು ಆಗಮಿಸುತ್ತಾರೆ. ತಾಲ್ಲೂಕು ಕಚೇರಿ ಸಂಕೀರ್ಣದ ಮೊದಲನೇ ಮಹಡಿಯಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಗೆ ದೈಹಿಕ ಅಶಕ್ತರು, ಹಿರಿಯ ನಾಗರಿಕರು ಸೇರಿದಂತೆ ದೈಹಿಕ ನೂನ್ಯತೆ ಇರುವವರು ಹೋಗುವುದೇ ಕಷ್ಟವಾಗಿದೆ.</p>.<p>ನೋಂದಣಾಧಿಕಾರಿಗಳ ಕಚೇರಿಯಲ್ಲಿ ವೀಲ್ಹ್ಚೇರ್ ವ್ಯವಸ್ಥೆ ಇದ್ದರೂ, ಅದರ ಮೂಲಕ ಸುಲಭವಾಗಿ ಮೊದಲನೇ ಮಹಡಿ ತಲುಪದಂತಹ ದುಸ್ಥಿತಿ ಎದ್ದು ಕಾಣುತ್ತಿದೆ. ತಾಲ್ಲೂಕು ಆಡಳಿತವೂ ಅಶಕ್ತರಿಗೆ ನೆರವಾಗಲು ಲಿಫ್ಟ್ ಅಳವಡಿಸುತ್ತೇವೆ ಎಂದು ಹುಸಿ ಆಶ್ವಾಸನೆಯನ್ನು ಸಾಕಷ್ಟು ವರ್ಷಗಳಿಂದ ಹೇಳಿಕೊಂಡೇ ಬರುತ್ತಿದೆ.</p>.<p>ಯಾವುದೇ ಜಮೀನುಗಳ ವಹಿವಾಟನ್ನು ನೋಂದಣಿ ಮಾಡಿಸಲು ಬರುವವರು, ಅವರ ಕುಟುಂಬಸ್ಥರನ್ನೆಲ್ಲಾ ಕರೆತಂದು ಸಹಿ ಮಾಡಿಸುವುದು ಅನಿವಾರ್ಯವಾಗಿದೆ. ಇವರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರು, ವಯೋಸಹಜವಾಗಿ ದೈಹಿಕ ಬಲಹೀನರಾಗಿರುವವರು ಇರುತ್ತಾರೆ.</p>.<p>ಇಂತಹ ಅಶಕ್ತರನ್ನು ಉಪನೋಂದಣಾಧಿಕಾರಿಗಳ ಕಚೇರಿಗೆ ಕರೆದುಕೊಂಡು ಹೋಗಲು ಹತ್ತಾರು ಜನರು ಅವರನ್ನು ವೀಲ್ಹ್ ಚೇರ್ನಲ್ಲಿ ಕುಳ್ಳರಿಸಿ, ಮೆರವಣಿಗೆ ರೀತಿಯಲ್ಲಿ ಮೆಟ್ಟಲುಗಳ ಮೂಲಕ ಕರೆದೊಯ್ಯಬೇಕಿದೆ.</p>.<p>ಸಾಕಷ್ಟು ಸಾರ್ವಜನಿಕರು ಈ ಕುರಿತು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ, ಅಂಗವಿಕಲ ಸ್ನೇಹಿ, ಹಿರಿಯ ನಾಗರಿಕರಿಗೆ ಅನುಕೂಲವಾಗುಂತೆ ಕಚೇರಿ ಸ್ಥಳಾಂತರ ಮಾಡುವಂತೆ ಒತ್ತಾಯಿಸಿದ್ದರೂ, ಯಾವುದೇ ರೀತಿಯಲ್ಲಿ ಪರಿಹಾರ ಇಂದಿಗೂ ನಿಡುವಲ್ಲಿ ಆಡಳಿತ ವರ್ಗವೂ ಸೋತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>