ಆಂಬುಲೆನ್ಸ್ ಚಾಲಕ ಸಾಕಷ್ಟು ಬಾರಿ ವಾಹನವನ್ನು ಮುನ್ನಡೆಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಪೊಲೀಸರೂ ಇರಲಿಲ್ಲ. ಸ್ಥಳೀಯರು ಸಾಕಷ್ಟು ಪ್ರಯಾಸದಿಂದ ವಾಹನಗಳನ್ನು ತೆರವುಗೊಳಿಸಿ ಆಂಬುಲೆನ್ಸ್ ಹೋಗಲು ಅವಕಾಶ ಮಾಡಿಕೊಟ್ಟರು. ಚನ್ನರಾಯಪಟ್ಟಣ ಮೂಲಕ ದೇವನಹಳ್ಳಿ ಕಡೆಗೆ ಹೋಗಬೇಕಿದ್ದ ಆಂಬುಲೆನ್ಸ್ ಜನಸಂದಣಿಯಿಂದ ದಿನ್ನೂರು, ವಿಜಯಪುರದ ಮೂಲಕ ದೇವನಹಳ್ಳಿಯ ಕಡೆಗೆ ತೆರಳಿತು.