<p><strong>ವಿಜಯಪುರ (ದೇವನಹಳ್ಳಿ):</strong> ಇಲ್ಲಿನ ಮಂಡಿಬೆಲೆ ರಸ್ತೆಯ ತೋಟದಲ್ಲಿ ಸಂಕ್ರಾಂತಿ ಪ್ರಯುಕ್ತ ಬುಧವಾರ ಸಾವಯವ ಕೃಷಿ- ಸುಗ್ಗಿ ಸಂಭ್ರಮ ಆಯೋಜಿಸಲಾಗಿತ್ತು. </p>.<p>ಭತ್ತ ಮತ್ತು ರಾಗಿ ರಾಶಿಗೆ ತಳಿರು ತೋರಣಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಲಾಯಿತು. ಜಾನುವಾರು ಪೂಜೆ, ಜಾನುವಾರು ಕಿಚ್ಚು ಹಾಯಿಸುವಿಕೆ ನಂತರ ಸಾಂಪ್ರಾದಾಯಿಕ ಉಡುಗೆಯಲ್ಲಿದ್ದ ಜನರು ಎಳ್ಳು,ಬೆಲ್ಲ ವಿನಿಮಯ ಮಾಡಿಕೊಂಡರು.</p>.<p>ಎತ್ತಿನಬಂಡಿ ಸವಾರಿ, ಜಾನಪದ ಗೀತೆ ಗಾಯನ, ನೃತ್ಯ ಪ್ರದರ್ಶನ, ರಂಗೋಲಿ ಸ್ಪರ್ಧೆ, ಮಡಿಕೆ ಒಡೆಯುವ ಸ್ಪರ್ಧೆ, ಗಾಳಿಪಟ, ಪಂಜು ತಿರುಸುವಿಕೆ ಹಬ್ಬದ ಸಂಭ್ರಮ ಇಮ್ಮಡಿಗೊಳಿಇಸಿದವು. ಸೋರಪಲ್ಲಿ ಚಂದ್ರಶೇಖರ್ ಅವರು ಗ್ರಾಮೀಣ ಸಂಸ್ಕೃತಿಯ ಜಾನಪದ ಗೀತೆಗಳನ್ನು ಹಾಡಿದರು.</p>.<p>ತೋಟದ ಮಾಲೀಕ ವಿಎಸ್ಆರ್ ರಮೇಶ,ಸಾವಯವ ಕೃಷಿಕ ಬೋದಗೂರು ವೆಂಕಟಶಾಮರೆಡ್ಡಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಅಂಬರೀಶ್ ಗೌಡ, ಬಿ.ಕೆ.ದಿನೇಶ್,ಆವತಿ ಗ್ರಾಮದ ಅನಿಲ್, ವೆಂಕಟೇಶ್, ಹಾರೋಹಳ್ಳಿಯ ಕೃಷ್ಣಮೂರ್ತಿ, ಅಟ್ಟೂರಿನ ಸೋಮಶೇಖರ್, ರಮೇಶ್, ಧರ್ಮಪುರದ ವೀರಭದ್ರ, ನಕ್ಕನಹಳ್ಳಿಯ ಪ್ರಸಾದ್, ನಡುಪನಾಯಕನಹಳ್ಳಿಯ ಶ್ರೀಧರ್, ಅರಿಕೆರೆಯ ನಾರಾಯಣಸ್ವಾಮಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ (ದೇವನಹಳ್ಳಿ):</strong> ಇಲ್ಲಿನ ಮಂಡಿಬೆಲೆ ರಸ್ತೆಯ ತೋಟದಲ್ಲಿ ಸಂಕ್ರಾಂತಿ ಪ್ರಯುಕ್ತ ಬುಧವಾರ ಸಾವಯವ ಕೃಷಿ- ಸುಗ್ಗಿ ಸಂಭ್ರಮ ಆಯೋಜಿಸಲಾಗಿತ್ತು. </p>.<p>ಭತ್ತ ಮತ್ತು ರಾಗಿ ರಾಶಿಗೆ ತಳಿರು ತೋರಣಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಲಾಯಿತು. ಜಾನುವಾರು ಪೂಜೆ, ಜಾನುವಾರು ಕಿಚ್ಚು ಹಾಯಿಸುವಿಕೆ ನಂತರ ಸಾಂಪ್ರಾದಾಯಿಕ ಉಡುಗೆಯಲ್ಲಿದ್ದ ಜನರು ಎಳ್ಳು,ಬೆಲ್ಲ ವಿನಿಮಯ ಮಾಡಿಕೊಂಡರು.</p>.<p>ಎತ್ತಿನಬಂಡಿ ಸವಾರಿ, ಜಾನಪದ ಗೀತೆ ಗಾಯನ, ನೃತ್ಯ ಪ್ರದರ್ಶನ, ರಂಗೋಲಿ ಸ್ಪರ್ಧೆ, ಮಡಿಕೆ ಒಡೆಯುವ ಸ್ಪರ್ಧೆ, ಗಾಳಿಪಟ, ಪಂಜು ತಿರುಸುವಿಕೆ ಹಬ್ಬದ ಸಂಭ್ರಮ ಇಮ್ಮಡಿಗೊಳಿಇಸಿದವು. ಸೋರಪಲ್ಲಿ ಚಂದ್ರಶೇಖರ್ ಅವರು ಗ್ರಾಮೀಣ ಸಂಸ್ಕೃತಿಯ ಜಾನಪದ ಗೀತೆಗಳನ್ನು ಹಾಡಿದರು.</p>.<p>ತೋಟದ ಮಾಲೀಕ ವಿಎಸ್ಆರ್ ರಮೇಶ,ಸಾವಯವ ಕೃಷಿಕ ಬೋದಗೂರು ವೆಂಕಟಶಾಮರೆಡ್ಡಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಅಂಬರೀಶ್ ಗೌಡ, ಬಿ.ಕೆ.ದಿನೇಶ್,ಆವತಿ ಗ್ರಾಮದ ಅನಿಲ್, ವೆಂಕಟೇಶ್, ಹಾರೋಹಳ್ಳಿಯ ಕೃಷ್ಣಮೂರ್ತಿ, ಅಟ್ಟೂರಿನ ಸೋಮಶೇಖರ್, ರಮೇಶ್, ಧರ್ಮಪುರದ ವೀರಭದ್ರ, ನಕ್ಕನಹಳ್ಳಿಯ ಪ್ರಸಾದ್, ನಡುಪನಾಯಕನಹಳ್ಳಿಯ ಶ್ರೀಧರ್, ಅರಿಕೆರೆಯ ನಾರಾಯಣಸ್ವಾಮಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>