ಜನಧನ್ ಯೋಜನೆಯಡಿ ಖಾತೆ ತೆರೆಯುವಂತೆ ಹೇಳಿದಾಗ ನಮ್ಮ ಖಾತೆಗೆ ₹15 ಲಕ್ಷ ಹಣ ಬರುತ್ತದೆ ಎಂದು ಜನ ಉತ್ಸಾಹದಲ್ಲಿದ್ದರು. ಆದರೆ ಇದುವರೆಗೆ ನಯಾಪೈಸೆ ಬರಲಿಲ್ಲ. ಬದಲಿಗೆ ನೋಟ್ ಬ್ಯಾನ್ ಮಾಡಿ, ಹೊರೆ ಹೊರೆಸಿದರು. ಸಿಲಿಂಡರ್, ಅಗತ್ಯ ವಸ್ತುಗಳು, ರಸಗೊಬ್ಬರಗಳ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದರು ಎಂದು ದೂರಿದರು.