ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ರವೀಂದ್ರ, ‘ತಂದೆ ನಾಗರಾಜಪ್ಪ, ತಾಯಿ ಜಯಮ್ಮರ ಮೊದಲ ಮಗ, 10ನೇ ತರಗತಿ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ತೇರ್ಗಡೆ ಹೊಂದಿದ್ದೇನೆ. ಕಿತ್ತು ತಿನ್ನುವ ಬಡತನ ಬೇರೆ, ಸಹೋದರ ಭೂ ಸೇನೆಯಲ್ಲಿ ಹವಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಂದಿನ ಪರಿಸ್ಥಿತಿಯಲ್ಲಿ ಜೀವನಕ್ಕೆ ಒಂದು ಮಾರ್ಗ ಹುಡುಕಲೇ ಬೇಕಿತ್ತು. 2001ರಲ್ಲಿ ಗೃಹರಕ್ಷಕದಳದಲ್ಲಿ ನೇಮಕಗೊಂಡೆ’ ಎಂದು ಹೇಳಿದರು.