ಸೂಲಿಬೆಲೆ: ಚುನಾವಣೆ ಗುರುತಿನ ಚೀಟಿ, ಆಧಾರ್ ಕಾರ್ಡ್ ಇದ್ದರೂ ಪಡಿತರ ಚೀಟಿ ಇಲ್ಲಿವರೆಗೆ ಸಿಗಲಿಲ್ಲ. ಚುನಾವಣೆ ಸಂದರ್ಭದಲ್ಲಿ ಬರುವ ಜನಪ್ರತಿನಿಧಿಗಳು ಪಡಿತರ ಚೀಟಿ ಮಾಡಿಸಿಕೊಡುವ ಭರವಸೆ ನೀಡಿ ಹೋಗುತ್ತಾರೆ. ಆದರೆ, ಇಂದಿನವರೆಗೂ ಭರವಸೆಯಾಗಿಯೇ ಉಳಿದಿದೆ ಎನ್ನುತ್ತಾರೆ ಬಿದಿರಿನ ಬುಟ್ಟಿ ಹೆಣೆಯುವ ವೃಯೋವೃದ್ಧೆ ನಂದಗುಡಿ ಕಮಲಮ್ಮ.