ಅಗ್ನಿ ಕೊಂಡಕ್ಕೆ ಬಿದ್ದ ಅರ್ಚಕಿಗೆ ಗಾಯ

ದೊಡ್ಡಬಳ್ಳಾಪುರ: ಅಗ್ನಿಕೊಂಡದಲ್ಲಿ ದೇವರನ್ನು ಹೊತ್ತು ಹಾದು ಹೋಗುವ ವೇಳೆ ಆಕಸ್ಮಿಕವಾಗಿ ಬಿದ್ದು ಅರ್ಚಕಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ರೇಣುಕಾ ಯಲ್ಲಮ್ಮ ದೇವಸ್ಥಾನದ ಅರ್ಚಕಿ ಅನುಜೋಗತಿಯಮ್ಮ ಗಾಯಗೊಂಡವರು.
ದೊಡ್ಡಬೆಳವಂಗಲದ ಶಾಂತಿ ನಗರದಲ್ಲಿರುವ ಅಜ್ಜನಕಟ್ಟೆ ರೇಣುಕಾ ಯಲ್ಲಮ್ಮ ದೇವಸ್ಥಾನದದಲ್ಲಿ ಅಗ್ನಿಕೊಂಡ ಸೇವೆ ವೇಳೆ ಈ ಅವಘಡ ನಡೆದಿದೆ. ಕಳಶ ಹೊತ್ತಿದ್ದ ಅನುಜೋಗತಿಯಮ್ಮ ಅಗ್ನಿಕೊಂಡ
ಪ್ರವೇಶಿಸಿದರು. ಈ ವೇಳೆ ಆಕಸ್ಮಿಕವಾಗಿ ಕೊಂಡದಲ್ಲಿ ಬಿದ್ದು ಅಸ್ವಸ್ಥಗೊಂಡರು.
ಕೂಡಲೇ ಸ್ಥಳದಲ್ಲಿದ್ದ ಭಕ್ತರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನಂತರ ದೇವಾಲಯಕ್ಕೆ
ಮರಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.