‘ಕೆರೆ ಅಂಚಿನಲ್ಲಿ ಹೊಡೆದು ಹಾಕಲಾಗಿರುವ ಗಾಜಿನ ಬಾಟಲಿಗಳ ಚೂರುಗಳು ಕೆರೆಯಲ್ಲಿ ನೀರು ಕುಡಿಯಲು ಹೋಗುವ ಕುರಿ, ಮೇಕೆ, ಹಸುಗಳು ಸೇರಿದಂತೆ ಮನುಷ್ಯರ ಕಾಲುಗಳಿಗೆ ಚುಚ್ಚಿಕೊಳ್ಳುತ್ತಿವೆ. ಕೆರೆಯಲ್ಲಿ ಬಿಸಾಡುತ್ತಿರುವ ಪ್ಲಾಸ್ಟಿಕ್ ಕವರ್ಗಳು ಜಲಚರಗಳಿಗೆ
ಕಂಟಕವಾಗಿ ಪರಿಣಮಿಸಿವೆ. ಕೆರೆ ಅಂಚಿನಲ್ಲಿ ಸಂಜೆ ವೇಳೆ ಕುಡುಕರ ಹಾವಳಿಯನ್ನು ಪೊಲೀಸರು ನಿಯಂತ್ರಿಸಿದರೆ ಮಾತ್ರ ಎಂದೂ ಬತ್ತದ ಗುಂಡಮಗೆರೆ ಕೆರೆ ಮತ್ತಷ್ಟು ವರ್ಷಗಳ ಕಾಲ ಸ್ವಚ್ಛವಾಗಿರಲು ಸಾಧ್ಯ’ ಎನ್ನುತ್ತಾರೆ ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ್.