<p><strong>ದೊಡ್ಡಬಳ್ಳಾಪುರ:</strong>ಎಂದೂ ಬತ್ತದ ಕೆರೆ ಎಂದೇ ಖ್ಯಾತಿಗಳಿಸಿರುವ ತಾಲ್ಲೂಕಿನ ಗುಂಡಮಗೆರೆ ಕೆರೆ ಅಂಗಳ ಮದ್ಯದ ಬಾಟಲಿಗಳಿಂದ ತುಂಬುತ್ತಿದ್ದು, ಕುಡುಕರ ತಾಣವಾಗಿ ಪರಿಣಮಿಸಿದೆ.</p>.<p>ಬೆಟ್ಟದ ತಪ್ಪಲಿನ ಸುಂದರ ಪರಿಸರದಲ್ಲಿ ಇರುವ ಈ ಕೆರೆಯಲ್ಲಿ ಅರ್ಧಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿದೆ. ಕೆರೆಯ ಸುತ್ತಲು ಬೆಟ್ಟ ಹಾಗೂ ಕಿರುಚಲು ಕಾಡು ಇರುವುದರಿಂದ ಪ್ರತಿದಿನ ಬೆಂಗಳೂರು ಸೇರಿದಂತೆ ತಾಲ್ಲೂಕಿನಿಂದಲೂ ನೂರಾರು ಜನ ಕೆರೆ ವೀಕ್ಷಣೆಗೆ ಇಲ್ಲಿಗೆ ಬರುತ್ತಾರೆ.</p>.<p>ಬೆಟ್ಟದ ತಪ್ಪಲಿನ ಕೆರೆ ಅಂಚಿನಲ್ಲಿ ಗಾಜಿನ ಬಾಟಲಿ, ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟೆಲ್, ಪ್ಲಾಸ್ಟಿಕ್ ಕವರ್ಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ.</p>.<p>‘ಕೆರೆ ಅಂಚಿನಲ್ಲಿ ಹೊಡೆದು ಹಾಕಲಾಗಿರುವ ಗಾಜಿನ ಬಾಟಲಿಗಳ ಚೂರುಗಳು ಕೆರೆಯಲ್ಲಿ ನೀರು ಕುಡಿಯಲು ಹೋಗುವ ಕುರಿ, ಮೇಕೆ, ಹಸುಗಳು ಸೇರಿದಂತೆ ಮನುಷ್ಯರ ಕಾಲುಗಳಿಗೆ ಚುಚ್ಚಿಕೊಳ್ಳುತ್ತಿವೆ. ಕೆರೆಯಲ್ಲಿ ಬಿಸಾಡುತ್ತಿರುವ ಪ್ಲಾಸ್ಟಿಕ್ ಕವರ್ಗಳು ಜಲಚರಗಳಿಗೆ<br />ಕಂಟಕವಾಗಿ ಪರಿಣಮಿಸಿವೆ. ಕೆರೆ ಅಂಚಿನಲ್ಲಿ ಸಂಜೆ ವೇಳೆ ಕುಡುಕರ ಹಾವಳಿಯನ್ನು ಪೊಲೀಸರು ನಿಯಂತ್ರಿಸಿದರೆ ಮಾತ್ರ ಎಂದೂ ಬತ್ತದ ಗುಂಡಮಗೆರೆ ಕೆರೆ ಮತ್ತಷ್ಟು ವರ್ಷಗಳ ಕಾಲ ಸ್ವಚ್ಛವಾಗಿರಲು ಸಾಧ್ಯ’ ಎನ್ನುತ್ತಾರೆ ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೊಡ್ಡಬಳ್ಳಾಪುರ:</strong>ಎಂದೂ ಬತ್ತದ ಕೆರೆ ಎಂದೇ ಖ್ಯಾತಿಗಳಿಸಿರುವ ತಾಲ್ಲೂಕಿನ ಗುಂಡಮಗೆರೆ ಕೆರೆ ಅಂಗಳ ಮದ್ಯದ ಬಾಟಲಿಗಳಿಂದ ತುಂಬುತ್ತಿದ್ದು, ಕುಡುಕರ ತಾಣವಾಗಿ ಪರಿಣಮಿಸಿದೆ.</p>.<p>ಬೆಟ್ಟದ ತಪ್ಪಲಿನ ಸುಂದರ ಪರಿಸರದಲ್ಲಿ ಇರುವ ಈ ಕೆರೆಯಲ್ಲಿ ಅರ್ಧಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿದೆ. ಕೆರೆಯ ಸುತ್ತಲು ಬೆಟ್ಟ ಹಾಗೂ ಕಿರುಚಲು ಕಾಡು ಇರುವುದರಿಂದ ಪ್ರತಿದಿನ ಬೆಂಗಳೂರು ಸೇರಿದಂತೆ ತಾಲ್ಲೂಕಿನಿಂದಲೂ ನೂರಾರು ಜನ ಕೆರೆ ವೀಕ್ಷಣೆಗೆ ಇಲ್ಲಿಗೆ ಬರುತ್ತಾರೆ.</p>.<p>ಬೆಟ್ಟದ ತಪ್ಪಲಿನ ಕೆರೆ ಅಂಚಿನಲ್ಲಿ ಗಾಜಿನ ಬಾಟಲಿ, ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟೆಲ್, ಪ್ಲಾಸ್ಟಿಕ್ ಕವರ್ಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ.</p>.<p>‘ಕೆರೆ ಅಂಚಿನಲ್ಲಿ ಹೊಡೆದು ಹಾಕಲಾಗಿರುವ ಗಾಜಿನ ಬಾಟಲಿಗಳ ಚೂರುಗಳು ಕೆರೆಯಲ್ಲಿ ನೀರು ಕುಡಿಯಲು ಹೋಗುವ ಕುರಿ, ಮೇಕೆ, ಹಸುಗಳು ಸೇರಿದಂತೆ ಮನುಷ್ಯರ ಕಾಲುಗಳಿಗೆ ಚುಚ್ಚಿಕೊಳ್ಳುತ್ತಿವೆ. ಕೆರೆಯಲ್ಲಿ ಬಿಸಾಡುತ್ತಿರುವ ಪ್ಲಾಸ್ಟಿಕ್ ಕವರ್ಗಳು ಜಲಚರಗಳಿಗೆ<br />ಕಂಟಕವಾಗಿ ಪರಿಣಮಿಸಿವೆ. ಕೆರೆ ಅಂಚಿನಲ್ಲಿ ಸಂಜೆ ವೇಳೆ ಕುಡುಕರ ಹಾವಳಿಯನ್ನು ಪೊಲೀಸರು ನಿಯಂತ್ರಿಸಿದರೆ ಮಾತ್ರ ಎಂದೂ ಬತ್ತದ ಗುಂಡಮಗೆರೆ ಕೆರೆ ಮತ್ತಷ್ಟು ವರ್ಷಗಳ ಕಾಲ ಸ್ವಚ್ಛವಾಗಿರಲು ಸಾಧ್ಯ’ ಎನ್ನುತ್ತಾರೆ ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>