ಪ್ರತಿಭಟನೆಯಲ್ಲಿ ಉಪನ್ಯಾಸಕ ರವೂಫ್, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ನಗರ ಅಧ್ಯಕ್ಷ ಬಷೀರ್, ಮುಸ್ಲಿಂ ಮುಖಂಡರಾದ ತೂಬಗೆರೆ ಷರೀಫ್, ಆಜನ್ ಬಾಬಾ ಮಾತನಾಡಿ, ದೇಶದ ಮೇಲೆ ಯಾವುದೇ ಆಕ್ರಮಣ ಮಾಡಿದರೂ ಸಹಿಸಲಾಗುವುದಿಲ್ಲ. ಪಾಕಿಸ್ತಾನದ ಕೃತ್ಯವನ್ನು ಬೆಂಬಲಿಸಿ ಜೈಕಾರ ಹಾಕುವ ಯಾವುದೇ ಸಮುದಾಯದವನ್ನು ಖಂಡಿಸಬೇಕು. ದೇಶ ಕಾಯುತ್ತಿರುವ ಯೋಧರಿಗೆ ಗೌರವ ಸಲ್ಲಿಸಬೇಕಿರುವುದು ಎಲ್ಲ ಭಾರತೀಯರ ಕರ್ತವ್ಯ ಎಂದರು.