ಹೆಚ್ಚಿನ ನೀರುಗಳು ಕೆರೆ ಹಾಗೂ ಕೆರೆ ಸುತ್ತಮುತ್ತಲಿನ ಹಳ್ಳಗಳಲ್ಲಿ ಹರಿಯುತ್ತಿವೆ. ಹೀಗಾಗಿ ಹುಲುಕುಡಿ ಬೆಟ್ಟದ ತಪ್ಪಲಿನ ಕಡೆಗೆ ಹೋಗಲು ಸಾಧ್ಯವಾಗದೆ ತಿಪ್ಪೂರು ಗ್ರಾಮದ ಕಡೆಗೆ ಬಂದಿದೆ. ಬುಧವಾರ ಬೆಳಿಗ್ಗೆ ಗ್ರಾಮದ ಸಮೀಪ ಹೆಬ್ಬಾವನ್ನು ಕಂಡ ಜನ ಅದನ್ನು ರಕ್ಷಿಸಿ ಮತ್ತೆ ಬೆಟ್ಟದ ತಪ್ಪಲಿನ ಕುರುಚಲು ಕಾಡಿಗೆ ಬಿಟ್ಟಿದ್ದಾರೆ. ಹಬ್ಬಾವನ್ನು ನೋಡಲು ತಿಪ್ಪೂರು ಹಾಗೂ ಅಕ್ಕಪಕ್ಕದ ನೂರಾರು ಜನ ಸೇರಿದ್ದರು.