<p><strong>ಆನೇಕಲ್:</strong>ತಾಲ್ಲೂಕಿನ ಹೀಲಲಿಗೆ ರೈಲ್ವೆ ನಿಲ್ದಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್. ಅಶೋಕ ಅಧಿಕಾರಿಗಳೊಂದಿಗೆ ಗುರುವಾರ ಆಗಮಿಸಿ ದ್ವಿಪಥದ ರೈಲ್ವೆ ಹಳಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.</p>.<p>ಬೈಯಪ್ಪನಹಳ್ಳಿ- ರಾಜನಕುಂಟೆ- ಯಶವಂತಪುರ- ಹೊಸೂರು ರಸ್ತೆ ಸಂಪರ್ಕಿಸುವ ರೈಲ್ವೆ ಮಾರ್ಗಗಳ ದ್ವಿಪಥದ ಹಳಿ (ರೈಲ್ವೆ ಡಬ್ಲಿಂಗ್) ಕಾಮಗಾರಿ ನಡೆಯುತ್ತಿದ್ದು, 2023ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.</p>.<p>ಸಬ್ ಅರ್ಬನ್ ರೈಲ್ವೆ ಯೋಜನೆಯು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ. 148 ಕಿ.ಮೀ ಯೋಜನೆ ಇದಾಗಿದ್ದು, ಸುಮಾರು ₹ 15,767 ಕೋಟಿ ಮೊತ್ತದ ಬೃಹತ್ ಯೋಜನೆಯಾಗಿದೆ. ಮೂರು ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.</p>.<p>ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಆನೇಕಲ್ ತಾಲ್ಲೂಕಿನ ಹೀಲಲಿಗೆವರೆಗೆ ರೈಲಿನಲ್ಲಿ ಆಗಮಿಸಿದ ಮುಖ್ಯಮಂತ್ರಿ ಅವರು ದ್ವಿಪಥ ರೈಲು ಹಳಿಯ ಕಾಮಗಾರಿಯನ್ನು ಪರಿಶೀಲಿಸಿದರು. ಅಧಿಕಾರಿಗಳಿಂದ ಯೋಜನೆ ಬಗ್ಗೆ ಮಾಹಿತಿ ಪಡೆದರು. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.</p>.<p>ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಜೀವರಾಜ್, ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಜಿಲ್ಲಾಧಿಕಾರಿ ಜೆ. ಮಂಜುನಾಥ್ ಹಾಜರಿದ್ದರು.</p>.<p class="Subhead">ರೈಲ್ವೆ ಡಬ್ಲಿಂಗ್: 70 ಕಿ.ಮೀ ಉದ್ದದ ರೈಲ್ವೆ ಡಬ್ಲಿಂಗ್ ಹಳಿಯಿಂದಾಗಿ ರೈಲುಗಳ ಸಂಚಾರ ಹೆಚ್ಚಾಗಲು ಸಾಧ್ಯವಾಗಲಿದೆ. ಬೆಂಗಳೂರಿನಿಂದ ಹೊಸೂರುವರೆಗೂ ದ್ವಿಪಥ ಹಳಿ ಕಾರ್ಯ ಪ್ರಗತಿಯಲ್ಲಿದೆ.</p>.<p>ಸಬ್ ಅರ್ಬನ್ ರೈಲ್ವೆ ಯೋಜನೆಯು 148 ಕಿ.ಮೀ ಉದ್ದದ ಯೋಜನೆಯಾಗಿದೆ. 57 ಹೊಸ ನಿಲ್ದಾಣಗಳು, ನಾಲ್ಕು ಕಾರಿಡಾರ್ಗಳು ಇರಲಿವೆ. 10 ಲಕ್ಷಕ್ಕಿಂತ ಹೆಚ್ಚಿನ ಜನರು ಪ್ರತಿನಿತ್ಯ ಪ್ರಯಾಣಿಸಲು ಅನುಕೂಲವಾಗುವಂತೆ ಪರಿಸರಸ್ನೇಹಿ ಕಾಮಗಾರಿಯಾಗಿದೆ.</p>.<p>ಸಬ್ ಅರ್ಬಲ್ ರೈಲ್ವೆ ಯೋಜನೆಯಿಂದಾಗಿ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ, ವೀರಸಂದ್ರ, ಜಿಗಣಿ, ಅತ್ತಿಬೆಲೆ ಕೈಗಾರಿಕೆಗಳಿಗೆ ಸಂಪರ್ಕ ಸುಲಭವಾಗುತ್ತದೆ. ಯೋಜನೆಯ ನಾಲ್ಕನೇ ಕಾರಿಡಾರ್ 46.24 ಕಿ.ಮೀ ದೂರವಿದ್ದು, ಹೀಲಲಿಗೆ-ರಾಜನಕುಂಟೆ ಮಾರ್ಗವಾಗಿದೆ. ಹೀಲಲಿಗೆ- ಬೊಮ್ಮಸಂದ್ರ- ಸಿಂಗೇನಅಗ್ರಹಾರ- ಹುಸ್ಕೂರು- ಅಂಬೇಡ್ಕರ್ ನಗರ- ಕಾರ್ಮಾಲರಾಮ್- ಬೆಳ್ಳಂಡೂರು ರಸ್ತೆ- ಮಾರತಹಳ್ಳಿ- ಕಗ್ಗದಾಸನಪುರ- ಬೈಯಪ್ಪನಹಳ್ಳಿ- ಚನ್ನಸಂದ್ರ- ಹೊರಮಾವು- ಹೆಣ್ಣೂರು- ಥಣಿಸಂದ್ರ- ಹೆಗ್ಗಡೆನಗರ- ಜಕ್ಕೂರು-ಯಲಹಂಕ- ಮುದ್ದೇನಹಳ್ಳಿ- ರಾಜನಕುಂಟೆ ಮಾರ್ಗವಾಗಿದೆ.</p>.<p>ಆನೇಕಲ್ ತಾಲ್ಲೂಕಿನಲ್ಲಿ ಐದು ರೈಲ್ವೆ ನಿಲ್ದಾಣಗಳು ಸಬ್ಅರ್ಬನ್ ಯೋಜನೆಯಡಿ ಬರಲಿವೆ. ಹೀಲಲಿಗೆ, ಬೊಮ್ಮಸಂದ್ರ, ಸೀಂಗೇನಅಗ್ರಹಾರ, ಹುಸ್ಕೂರು, ಅಂಬೇಡ್ಕರ್ ನಗರ ಸೇರಿದಂತೆ ಐದು ನಿಲ್ದಾಣಗಳು ತಾಲ್ಲೂಕಿನ ವ್ಯಾಪ್ತಿಗೆ ಬರಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್:</strong>ತಾಲ್ಲೂಕಿನ ಹೀಲಲಿಗೆ ರೈಲ್ವೆ ನಿಲ್ದಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್. ಅಶೋಕ ಅಧಿಕಾರಿಗಳೊಂದಿಗೆ ಗುರುವಾರ ಆಗಮಿಸಿ ದ್ವಿಪಥದ ರೈಲ್ವೆ ಹಳಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.</p>.<p>ಬೈಯಪ್ಪನಹಳ್ಳಿ- ರಾಜನಕುಂಟೆ- ಯಶವಂತಪುರ- ಹೊಸೂರು ರಸ್ತೆ ಸಂಪರ್ಕಿಸುವ ರೈಲ್ವೆ ಮಾರ್ಗಗಳ ದ್ವಿಪಥದ ಹಳಿ (ರೈಲ್ವೆ ಡಬ್ಲಿಂಗ್) ಕಾಮಗಾರಿ ನಡೆಯುತ್ತಿದ್ದು, 2023ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.</p>.<p>ಸಬ್ ಅರ್ಬನ್ ರೈಲ್ವೆ ಯೋಜನೆಯು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ. 148 ಕಿ.ಮೀ ಯೋಜನೆ ಇದಾಗಿದ್ದು, ಸುಮಾರು ₹ 15,767 ಕೋಟಿ ಮೊತ್ತದ ಬೃಹತ್ ಯೋಜನೆಯಾಗಿದೆ. ಮೂರು ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.</p>.<p>ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಆನೇಕಲ್ ತಾಲ್ಲೂಕಿನ ಹೀಲಲಿಗೆವರೆಗೆ ರೈಲಿನಲ್ಲಿ ಆಗಮಿಸಿದ ಮುಖ್ಯಮಂತ್ರಿ ಅವರು ದ್ವಿಪಥ ರೈಲು ಹಳಿಯ ಕಾಮಗಾರಿಯನ್ನು ಪರಿಶೀಲಿಸಿದರು. ಅಧಿಕಾರಿಗಳಿಂದ ಯೋಜನೆ ಬಗ್ಗೆ ಮಾಹಿತಿ ಪಡೆದರು. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.</p>.<p>ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಜೀವರಾಜ್, ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಜಿಲ್ಲಾಧಿಕಾರಿ ಜೆ. ಮಂಜುನಾಥ್ ಹಾಜರಿದ್ದರು.</p>.<p class="Subhead">ರೈಲ್ವೆ ಡಬ್ಲಿಂಗ್: 70 ಕಿ.ಮೀ ಉದ್ದದ ರೈಲ್ವೆ ಡಬ್ಲಿಂಗ್ ಹಳಿಯಿಂದಾಗಿ ರೈಲುಗಳ ಸಂಚಾರ ಹೆಚ್ಚಾಗಲು ಸಾಧ್ಯವಾಗಲಿದೆ. ಬೆಂಗಳೂರಿನಿಂದ ಹೊಸೂರುವರೆಗೂ ದ್ವಿಪಥ ಹಳಿ ಕಾರ್ಯ ಪ್ರಗತಿಯಲ್ಲಿದೆ.</p>.<p>ಸಬ್ ಅರ್ಬನ್ ರೈಲ್ವೆ ಯೋಜನೆಯು 148 ಕಿ.ಮೀ ಉದ್ದದ ಯೋಜನೆಯಾಗಿದೆ. 57 ಹೊಸ ನಿಲ್ದಾಣಗಳು, ನಾಲ್ಕು ಕಾರಿಡಾರ್ಗಳು ಇರಲಿವೆ. 10 ಲಕ್ಷಕ್ಕಿಂತ ಹೆಚ್ಚಿನ ಜನರು ಪ್ರತಿನಿತ್ಯ ಪ್ರಯಾಣಿಸಲು ಅನುಕೂಲವಾಗುವಂತೆ ಪರಿಸರಸ್ನೇಹಿ ಕಾಮಗಾರಿಯಾಗಿದೆ.</p>.<p>ಸಬ್ ಅರ್ಬಲ್ ರೈಲ್ವೆ ಯೋಜನೆಯಿಂದಾಗಿ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ, ವೀರಸಂದ್ರ, ಜಿಗಣಿ, ಅತ್ತಿಬೆಲೆ ಕೈಗಾರಿಕೆಗಳಿಗೆ ಸಂಪರ್ಕ ಸುಲಭವಾಗುತ್ತದೆ. ಯೋಜನೆಯ ನಾಲ್ಕನೇ ಕಾರಿಡಾರ್ 46.24 ಕಿ.ಮೀ ದೂರವಿದ್ದು, ಹೀಲಲಿಗೆ-ರಾಜನಕುಂಟೆ ಮಾರ್ಗವಾಗಿದೆ. ಹೀಲಲಿಗೆ- ಬೊಮ್ಮಸಂದ್ರ- ಸಿಂಗೇನಅಗ್ರಹಾರ- ಹುಸ್ಕೂರು- ಅಂಬೇಡ್ಕರ್ ನಗರ- ಕಾರ್ಮಾಲರಾಮ್- ಬೆಳ್ಳಂಡೂರು ರಸ್ತೆ- ಮಾರತಹಳ್ಳಿ- ಕಗ್ಗದಾಸನಪುರ- ಬೈಯಪ್ಪನಹಳ್ಳಿ- ಚನ್ನಸಂದ್ರ- ಹೊರಮಾವು- ಹೆಣ್ಣೂರು- ಥಣಿಸಂದ್ರ- ಹೆಗ್ಗಡೆನಗರ- ಜಕ್ಕೂರು-ಯಲಹಂಕ- ಮುದ್ದೇನಹಳ್ಳಿ- ರಾಜನಕುಂಟೆ ಮಾರ್ಗವಾಗಿದೆ.</p>.<p>ಆನೇಕಲ್ ತಾಲ್ಲೂಕಿನಲ್ಲಿ ಐದು ರೈಲ್ವೆ ನಿಲ್ದಾಣಗಳು ಸಬ್ಅರ್ಬನ್ ಯೋಜನೆಯಡಿ ಬರಲಿವೆ. ಹೀಲಲಿಗೆ, ಬೊಮ್ಮಸಂದ್ರ, ಸೀಂಗೇನಅಗ್ರಹಾರ, ಹುಸ್ಕೂರು, ಅಂಬೇಡ್ಕರ್ ನಗರ ಸೇರಿದಂತೆ ಐದು ನಿಲ್ದಾಣಗಳು ತಾಲ್ಲೂಕಿನ ವ್ಯಾಪ್ತಿಗೆ ಬರಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>