ಮಂಟಪ ಕುಸಿದಾಗ ಜೊತೆದಿದ್ದವರು 108 ಅಂಬುಲೆನ್ಸ್ಗೆ ಕರೆಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಆಂಬುಲೆನ್ಸ್ ಚಾಲಕ ಪರಿಸ್ಥಿತಿಯನ್ನು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ. ಅಗ್ನಿಶಾಮಕ ದಳದವರ ಸಹಾಯದಿಂದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಕೆಂಬಳಗಾನಹಳ್ಳಿಯ ಶ್ರೀನಿವಾಸ ಹಾಗು ಮಂಜುನಾಥ್, ಯಲಹಂಕದ ಸಬಾಸಿನ್ ಎಂಬುವವರನ್ನು ರಕ್ಷಿಸಿ ವಶಕ್ಕೆ ಪಡೆದು ಚಿಕಿತ್ಸೆಗೆ ದಾಖಲಾಗಿಸಿರುವುದಾಗಿ ನಂದಗುಡಿ ಪೊಲೀಸರು ತಿಳಿಸಿದ್ದಾರೆ. ನಂದಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.