‘ಈ ಹಿಂದೆ ಕೋವಿಡ್–19ರಿಂದ ಮೃತಪಟ್ಟವರನ್ನು ಆಯಾ ಗ್ರಾಮದಲ್ಲಿ ಇರುವ ಸ್ಮಶಾನದಲ್ಲೇ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು. ಆದರೆ, ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ, ಪ್ರತ್ಯೇಕ ಸ್ಮಶಾನ ಗುರುತಿಸಲು ಮುಂದಾಗುತ್ತಿರುವಾಗ ಸರ್ವೇ ಇಲಾಖೆ ಮತ್ತು ಕಂದಾಯ ಇಲಾಖೆ ವಿರುದ್ಧವೂ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗದುಕೊಂಡು ಜಾಗ ಗುರುತಿಸಬೇಕಾಗಿದೆ’ ಎಂದರು.