ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ಸಿದ್ದರಾಮೇಶ್ವ ಅವರು ಶ್ರಮಿಕ ವರ್ಗದಲ್ಲಿ ಜನಿಸಿ, 12ನೇ ಶತಮಾನದಲ್ಲೇ ದೀರ್ಘಕಾಲಿನ ಜನೋಪಯೋಗಿ ಕೆಲಸಗಳ ಮೂಲಕ ವಚನಕಾರರಲ್ಲೇ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ ಎಂದರು.
ಕೆರೆ, ಕುಂಟೆಗಳನ್ನು ಕಟ್ಟಿಸಿ ಜನ, ಪ್ರಾಣಿ ಪಕ್ಷಿ ಸೇರಿದಂತೆ ಇಡೀ ಪ್ರಕೃತಿ ಸುಂದರವಾಗಿರುವಂತೆ ಮಾಡಿದ ಸಿದ್ದರಾಮೇಶ್ವರ ಅವರ ಸಮಾಜ ಸೇವೆ ಇಂದಿಗೂ ಮಾದರಿ. ಸರಳ ಭಾಷೆ ಮೂಲಕ ಸಾಮಾನ್ಯ ಜನರೂ ಅರ್ಥಮಾಡಿಕೊಳ್ಳುವಂತೆ ಜೀವನದ ಮೌಲ್ಯಗಳನ್ನು ವಚನಗಳ ಮೂಲಕ ಅರಿತುಕೊಳ್ಳುವಂತೆ ರಚಿಸಿದ್ದಾರೆ. ಅಂತಹ ಮಹನೀಯರ ಸಾಧನೆ ನಮಗೆ ಸ್ಫೂರ್ತಿಯಾಗಬೇಕಿದೆ ಎಂದರು.
ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಸುಂದರರಾಜ್, ಗ್ರಾಮ ಲೆಕ್ಕಾಧಿಕಾರಿ ಎಚ್.ಎಸ್.ರಾಜೇಂದ್ರಬಾಬು ಸೇರಿದಂತೆ ಭೋವಿ ಸಮುದಾಯದ ಮುಖಂಡರಾದ ಓಬದೇನಹಳ್ಳಿ ಮುನಿಯಪ್ಪ, ಬಸವರಾಜ್, ರಾಮಕೃಷ್ಣ ಇದ್ದರು.