ಬುಧವಾರ, 29 ಅಕ್ಟೋಬರ್ 2025
×
ADVERTISEMENT
ADVERTISEMENT

ದೇವನಹಳ್ಳಿ | ರೇಷ್ಮೆಗೆ ಮೊಂಥಾ ಚಂಡಮಾರುತ ಹೊಡೆತ: ರೈತರಿಗೆ ಮತ್ತೆ ಸಂಕಷ್ಟ

Published : 29 ಅಕ್ಟೋಬರ್ 2025, 2:09 IST
Last Updated : 29 ಅಕ್ಟೋಬರ್ 2025, 2:09 IST
ಫಾಲೋ ಮಾಡಿ
Comments
ಮೊಂಥಾ ಚಂಡಮಾರುತದಿಂದ ಒಂದೆಡೆ ರೇಷ್ಮೆಗೂಡಿನ ಬೆಲೆ ಕುಸಿತ ಕಂಡು ಬರುತ್ತಿದೆ. ಮತ್ತೊಂದೆಡೆ ಹುಳುಗಳು ರೋಗಕ್ಕೆ ತುತ್ತಾಗಿ ಬೆಳೆಗಾರರು ಹೆಚ್ಚು ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ನಷ್ಟ ಪರಿಹಾರ ನೀಡಬೇಕು
ರವಿಕುಮಾರ್, ರೇಷ್ಮೆ ಬೆಳೆಗಾರ
ರೇಷ್ಮೆ ಹುಳ
ರೇಷ್ಮೆ ಹುಳ
ರೇಷ್ಮೆ ಇಲಾಖೆಯಿಂದ ಸಲಹೆ
ಮೊಂಥಾ ಚಂಡಮಾರುತ ಇರುವುದರಿಂದ ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೇಷ್ಮೆ ಇಲಾಖೆ ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಬೆಳೆಗಾರರಿಗೆ ಸಲಹೆ ನೀಡಿದೆ. ಈಗಿನ ವಾತಾವರಣದಲ್ಲಿ ಸಹಜವಾಗಿ ರೇಷ್ಮೆ ಹುಳುವಿನಲ್ಲಿ ಸುಣ್ಣಕಟ್ಟು ಹಾಲು ತೊಂಡೆ ಇತರೆ ರೋಗಬಾಧೆ ಕಾಣಿಸಿಕೊಳ್ಳಲಿದೆ. ರೇಷ್ಮೆ ಹುಳುವಿಗೆ ಬೆಳಿಗ್ಗೆ ಹಿಪ್ಪುನೇರಳೆ ಸೊಪ್ಪು ಹಾಕುವ ಮುನ್ನ ಸುಣ್ಣ ಕ್ಯಾಪ್ಟನ್ ವಿಜೇತಾ ಸಿಂಪಡಿಸಬೇಕು. ರೇಷ್ಮೆ ಹುಳು ಮನೆಯಲ್ಲಿ ಗಾಳಿ ಬರುವಂತೆ ಕಿಟಕಿ ಬಾಗಿಲು ತೆರೆಯಬೇಕು. ಹೀಟರ್ ಕೆಂಡ ಇಟ್ಟು ಉಷ್ಣಾಂಶ ಹೆಚ್ಚಿಸಬೇಕು. ಹಣ್ಣಾಗಿರುವ ಹುಳ ಹಾಕಿರುವ ಚಂದ್ರಿಕೆ ಶೆಡ್‍ಗಳಲ್ಲಿ ಉಷ್ಣಾಂಶ ಹೆಚ್ಚಿಸಿಕೊಳ್ಳಬೇಕು. ತೇವಾಂಶದ ಸೊಪ್ಪು ಹಾಕಬಾರದು ಎಂದು ಬೆಂಗಳೂರು ಗ್ರಾಮಾಂತರ ರೇಷ್ಮೆ ಇಲಾಖೆ (ಜಿ.ಪಂ) ಉಪನಿರ್ದೇಶಕ ಸಿ.ಎಂ.ಲಕ್ಷ್ಮಣ್ ಸಲಹೆ ನೀಡಿದ್ದಾರೆ.
ಹಿಪ್ಪು ನೇರಳೆ ಸೊಪ್ಪಿನ ತೋಟ
ಹಿಪ್ಪು ನೇರಳೆ ಸೊಪ್ಪಿನ ತೋಟ
ವರ್ಷದಲ್ಲಿ 131 ಹೆಕ್ಟೇರ್ ವಿಸ್ತರಣೆ
ಕೆಲ ವರ್ಷದಿಂದ ಮಾರುಕಟ್ಟೆಯಲ್ಲಿ ರೇಷ್ಮೆಗೂಡಿಗೆ ಉತ್ತಮ ಬೆಲೆ ಬಂದಿದೆ. ಹೀಗಾಗಿ ಜಿಲ್ಲೆಯ ರೈತರು ರೇಷ್ಮೆ ಸಾಕಾಣಿಕೆಯಲ್ಲಿ ಒಲವು ತೋರಿದ್ದಾರೆ. ಕಳೆದ ವರ್ಷ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5070 ಹೆಕ್ಟೇರ್ ಪ್ರದೇಶ ಹಿಪ್ಪುನೇರಳೆ ಸೊಪ್ಪಿನ ತೋಟದ ಪ್ರದೇಶ ಇದ್ದರೆ ಪ್ರಸ್ತುತ ವರ್ಷ 131 ಹೆಕ್ಟೇರ್ ವಿಸ್ತರಣೆಗೊಂಡು 5201 ಹೆಕ್ಟೇರ್ ಪ್ರದೇಶ ಹೊಂದಿದೆ.
ರೇಷ್ಮೆ ಗೂಡು
ರೇಷ್ಮೆ ಗೂಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT