ರೇಷ್ಮೆ ಮಾರುಕಟ್ಟೆಯ ಉಪ ನಿರ್ದೇಶಕಿ ಆಯಿಷಾ ಖಾನಂ ಮಾತನಾಡಿ, ‘ಮಾರುಕಟ್ಟೆಯಲ್ಲಿ ಶುದ್ಧೀಕರಣವಾಗಬೇಕು. ವಿದ್ಯುತ್ ಸಮಸ್ಯೆ, ಸಿ.ಸಿ. ಕ್ಯಾಮೆರಾಗಳನ್ನು ದುರಸ್ತಿಗೊಳಿಸಬೇಕು. ಮಾರುಕಟ್ಟೆಗೆ ₹ 1.20 ಕೋಟಿ ಪ್ರೋತ್ಸಾಹಧನ ಬಂದಿತ್ತು.
₹ 300ಕ್ಕಿಂತಲೂ ಕಡಿಮೆ ಬೆಲೆಗೆ ಗೂಡು ಮಾರಾಟ ಮಾಡಿರುವ ದೇಶೀಯ ತಳಿಯ 1 ಕೆ.ಜಿಗೆ ₹ 30, ದ್ವಿತಳಿ ಗೂಡಿಗೆ ₹ 50ರಂತೆ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ’ ಎಂದರು.