ದುಡಿಮೆ ಅರ್ಧಭಾಗ ಬಾಡಿಗೆಗೆ ದುಡಿಮೆಯಲ್ಲಿ ಅರ್ಧಭಾಗ ಮನೆ ಬಾಡಿಗೆಗೆ ಸರಿಹೋಗುತ್ತಿದೆ. ಉಳಿದ ಅರ್ಧದಲ್ಲಿ ಕುಟುಂಬ ನಿರ್ವಹಣೆ ಮಕ್ಕಳ ಶಿಕ್ಷಣ ಆರೋಗ್ಯ ಸುಧಾರಣೆ ಎಲ್ಲವೂ ಮಾಡಿಕೊಳ್ಳಬೇಕು. ನಮಗೆ ನಿವೇಶನ ನೀಡಿದರೆ ಸಾಲ ಮಾಡಿಯಾದರೂ ಮನೆ ಕಟ್ಟಿಕೊಂಡು ಬಾಡಿಗೆ ಹಣ ಉಳಿಸಿಕೊಂಡು ಜೀವನ ಮಾಡುತ್ತೇವೆ.
ವಿ.ಕುಮಾರ್ ಪೌರಕಾರ್ಮಿಕ
ಶಾರದಮ್ಮ
ಅಲ್ಪ ವೇತನದ ಜೀವನ ಜಂಜಾಟ ಅಲ್ಪ ವೇತನದಲ್ಲೇ ಮನೆ ಬಾಡಿಗೆ ಕಟ್ಟಿಕೊಂಡು ಜೀವನ ಮಾಡುತ್ತಿದ್ದೇವೆ. ಈಗ ಕಾಯಂ ಮಾಡಿದ್ದರೂ ನಮಗೆ ಸ್ವಂತ ಮನೆ ಇಲ್ಲದೆ ಹೋದರೆ ದುಡಿದ ಹಣವೆಲ್ಲಾ ಬಾಡಿಗೆ ಕಟ್ಟಬೇಕಾಗುತ್ತದೆ. ಆದ್ದರಿಂದ ನಮಗೂ ನಿವೇಶನ ಮಂಜೂರು ಮಾಡಿಕೊಟ್ಟರೆ ಅನುಕೂಲವಾಗುತ್ತದೆ.
ಶಾರದಮ್ಮ ಪೌರಕಾರ್ಮಿಕ ಮಹಿಳೆ
ಲಕ್ಷ್ಮಣ್
ನಿವೇಶನ ಕೊಡಿ ಹಲವಾರು ವರ್ಷಗಳಿಂದ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೇವೆ. ನಮಗೆ ಸಿಗುತ್ತಿರುವ ಸಂಬಳ ತೀರಾ ಕಡಿಮೆ. ಈಗಷ್ಟೆ ಸರ್ಕಾರ ಕಾಯಂಗೊಳಿಸಿದೆ. ಇದುವರೆಗೂ ನಾವು ಬಾಡಿಗೆ ಮನೆಗಳಲ್ಲೆ ಇದ್ದೇವೆ. ನಮಗೆ ನಿವೇಶನ ಮಂಜೂರು ಮಾಡಿಕೊಡಿ.
ಲಕ್ಷ್ಮಣ್ ಪೌರಕಾರ್ಮಿಕ
ಜಿ.ಆರ್.ಸಂತೋಷ್
ವಿಜಯಪುರ ಪ್ರಯತ್ನಕ್ಕೆ ಸಿಗದ ಫಲ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ಸೌಕರ್ಯ ಕಲ್ಪಿಸಲು ನಾವು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಫಲ ಸಿಗುತ್ತಿಲ್ಲ. ಭೂ ಮಾಪನ ಇಲಾಖೆಯವರು ಸಹಕಾರ ನೀಡಿ ಸರ್ವೆ ಮಾಡಿಕೊಟ್ಟರೆ ಮನೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಕೊಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ.