ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿಶ್ವಾಸ್, ‘ಹುಟ್ಟಿದ 10ನೇ ವರ್ಷಕ್ಕೆ ವಿದ್ಯುತ್ ಅವಘಡದಲ್ಲಿ ಎರಡು ಕೈ ಕಳೆದುಕೊಂಡೆ. ಸ್ನೇಹಿತರ, ಶಿಕ್ಷಕರು ಹಾಗೂ ಪೋಷಕರು ಸಹಕಾರ ಪ್ರೋತ್ಸಾಹ ನೀಡಿ ಅತ್ಮಸ್ಥೈರ್ಯ ತುಂಬಿದರು. ಅಲ್ಲಿಂದ ಜಿಲ್ಲಾ, ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲಲು ಸಾಧ್ಯವಾಗಿದೆ’ ಎಂದರು.