<p><strong>ದೇವನಹಳ್ಳಿ: </strong>‘ನಿತ್ಯ ಜೀವನದಲ್ಲಿ ನೋವು, ನಲಿವಿನ ಎಲ್ಲಾ ಪರಿಸ್ಥಿತಿಯಲ್ಲಿಯೂ ಸಮಭಾವ ಹೊಂದಲು ಹಾಗೂ ಮನಸ್ಸನ್ನು ಪ್ರಶಾಂತಗೊಳಿಸುವ ಸುಂದರ ಉಪಾಯವೇ ಯೋಗ’ ಎಂದು ಸಹಜ ಯೋಗ ಗುರು ಜಯಲಕ್ಷ್ಮಿ ಅಭಿಪ್ರಾಯಪಟ್ಟರು.</p>.<p>ಪಟ್ಟಣದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಶನಿವಾರ ಸಹಜ ಯೋಗ ಸಂಸ್ಥೆ ಮತ್ತು ಬಿಕೆಎಸ್ ಪ್ರತಿಷ್ಠಾನದ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಎರಡು ದಿನಗಳ ಉಚಿತ ಸಹಜ ಯೋಗ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಯೋಗವು ಮನಸ್ಸಿನ ಚಂಚಲತೆ ನಿಗ್ರಹಿಸಿ, ಏಕಾಗ್ರತೆ ಹೆಚ್ಚಿಸಬಲ್ಲ ಮನೋ ವ್ಯಾಯಾಮವಾಗಿದೆ. ಶಾಂತಿ, ಆನಂದ, ದಯಾ, ಸುಖ, ಪ್ರೇಮ ಇತರೆ ದಿವ್ಯಗುಣಗಳ ಅನುಭವವು ಪ್ರತಿನಿತ್ಯ ಯೋಗಾಸನ ಮಾಡುವವರಲ್ಲಿ ಉಂಟಾಗುತ್ತದೆ ಎಂದು ತಿಳಿಸಿದರು.</p>.<p>ದೈಹಿಕವಾಗಿ ಹೃದಯಕ್ಕೆ ವಿಶ್ರಾಂತಿ ದೊರೆಯುವುದರ ಜೊತೆಗೆ ನರಮಂಡಲಕ್ಕೆ ಚೈತನ್ಯ ಶಕ್ತಿ ನೀಡುತ್ತದೆ. ಮಾನಸಿಕ ಉದ್ವೇಗ ದೂರಾಗಿ ರೋಗ ನಿರೋಧಕ ಶಕ್ತಿ ದ್ವಿಗುಣಗೊಳ್ಳಲು ಯೋಗವೊಂದೇ ಮಾರ್ಗ ಎಂದರು.</p>.<p>ಬಿಕೆಎಸ್ ಪ್ರತಿಷ್ಠಾನದ ಬಿ.ಕೆ. ಶಿವಪ್ಪ ಮಾತನಾಡಿ, ಯೋಗದಿಂದ ಅತಿನಿದ್ದೆ, ಆಲಸ್ಯ, ಭಯ, ವ್ಯಕ್ತಿ ದ್ವೇಷ, ಜಾತಿ, ಮತ, ವಯೋಭೇದಗಳನ್ನು ನಿರ್ಮೂಲನೆ ಮಾಡಬಹುದಾಗಿದೆ. ಉಚಿತ ಯೋಗ ತರಬೇತಿ ಕಾರ್ಯಕ್ರಮವನ್ನು ಸ್ಥಳೀಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.</p>.<p>ಸಹಜ ಯೋಗ ತರಬೇತುದಾರರಾದ ಅನು ನಾಗೇಂದ್ರ, ಲಾವಣ್ಯ, ಮುನಿಕೃಷ್ಣಪ್ಪ, ಶ್ರೀಕಲ್ಪವೃಕ್ಷ ಗ್ರಾಮಾಭಿವೃದ್ಧಿ ಯೋಜನೆಯ ಪ್ರಧಾನ ಕಾರ್ಯದರ್ಶಿ ಸ್ವರ್ಣಾ ರಮೇಶ್, ಸಹ ಕಾರ್ಯದರ್ಶಿ ಗಾಯಿತ್ರಿ, ನಿರ್ದೇಶಕಿ ಅನಿತಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವನಹಳ್ಳಿ: </strong>‘ನಿತ್ಯ ಜೀವನದಲ್ಲಿ ನೋವು, ನಲಿವಿನ ಎಲ್ಲಾ ಪರಿಸ್ಥಿತಿಯಲ್ಲಿಯೂ ಸಮಭಾವ ಹೊಂದಲು ಹಾಗೂ ಮನಸ್ಸನ್ನು ಪ್ರಶಾಂತಗೊಳಿಸುವ ಸುಂದರ ಉಪಾಯವೇ ಯೋಗ’ ಎಂದು ಸಹಜ ಯೋಗ ಗುರು ಜಯಲಕ್ಷ್ಮಿ ಅಭಿಪ್ರಾಯಪಟ್ಟರು.</p>.<p>ಪಟ್ಟಣದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಶನಿವಾರ ಸಹಜ ಯೋಗ ಸಂಸ್ಥೆ ಮತ್ತು ಬಿಕೆಎಸ್ ಪ್ರತಿಷ್ಠಾನದ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಎರಡು ದಿನಗಳ ಉಚಿತ ಸಹಜ ಯೋಗ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಯೋಗವು ಮನಸ್ಸಿನ ಚಂಚಲತೆ ನಿಗ್ರಹಿಸಿ, ಏಕಾಗ್ರತೆ ಹೆಚ್ಚಿಸಬಲ್ಲ ಮನೋ ವ್ಯಾಯಾಮವಾಗಿದೆ. ಶಾಂತಿ, ಆನಂದ, ದಯಾ, ಸುಖ, ಪ್ರೇಮ ಇತರೆ ದಿವ್ಯಗುಣಗಳ ಅನುಭವವು ಪ್ರತಿನಿತ್ಯ ಯೋಗಾಸನ ಮಾಡುವವರಲ್ಲಿ ಉಂಟಾಗುತ್ತದೆ ಎಂದು ತಿಳಿಸಿದರು.</p>.<p>ದೈಹಿಕವಾಗಿ ಹೃದಯಕ್ಕೆ ವಿಶ್ರಾಂತಿ ದೊರೆಯುವುದರ ಜೊತೆಗೆ ನರಮಂಡಲಕ್ಕೆ ಚೈತನ್ಯ ಶಕ್ತಿ ನೀಡುತ್ತದೆ. ಮಾನಸಿಕ ಉದ್ವೇಗ ದೂರಾಗಿ ರೋಗ ನಿರೋಧಕ ಶಕ್ತಿ ದ್ವಿಗುಣಗೊಳ್ಳಲು ಯೋಗವೊಂದೇ ಮಾರ್ಗ ಎಂದರು.</p>.<p>ಬಿಕೆಎಸ್ ಪ್ರತಿಷ್ಠಾನದ ಬಿ.ಕೆ. ಶಿವಪ್ಪ ಮಾತನಾಡಿ, ಯೋಗದಿಂದ ಅತಿನಿದ್ದೆ, ಆಲಸ್ಯ, ಭಯ, ವ್ಯಕ್ತಿ ದ್ವೇಷ, ಜಾತಿ, ಮತ, ವಯೋಭೇದಗಳನ್ನು ನಿರ್ಮೂಲನೆ ಮಾಡಬಹುದಾಗಿದೆ. ಉಚಿತ ಯೋಗ ತರಬೇತಿ ಕಾರ್ಯಕ್ರಮವನ್ನು ಸ್ಥಳೀಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.</p>.<p>ಸಹಜ ಯೋಗ ತರಬೇತುದಾರರಾದ ಅನು ನಾಗೇಂದ್ರ, ಲಾವಣ್ಯ, ಮುನಿಕೃಷ್ಣಪ್ಪ, ಶ್ರೀಕಲ್ಪವೃಕ್ಷ ಗ್ರಾಮಾಭಿವೃದ್ಧಿ ಯೋಜನೆಯ ಪ್ರಧಾನ ಕಾರ್ಯದರ್ಶಿ ಸ್ವರ್ಣಾ ರಮೇಶ್, ಸಹ ಕಾರ್ಯದರ್ಶಿ ಗಾಯಿತ್ರಿ, ನಿರ್ದೇಶಕಿ ಅನಿತಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>