ಸರ್ಜಾಪುರದಿಂದ ದಮ್ಮಗಿರಿವರೆಗೆ ಪಥಸಂಚಲನ ಆಯೋಜಿಸಲಾಗಿತ್ತು. ಕೊರೆಗಾಂವ್ ಬಗ್ಗೆ ಅರಿವು ಮೂಡಿಸುವ ಪುಸ್ತಕ ಬಿಡುಗಡೆ ಮಾಡಲಾಯಿತು. ಕೊರೆಗಾಂವ್ ವಿಜಯೋತ್ಸವದ ಸಂಕೇತವಾಗಿ ದಮ್ಮಗಿರಿಯಲ್ಲಿ ವಿಜಯಸ್ತಂಭ ಸ್ಥಾಪನೆ ಮಾಡಲಾಯಿತು. ಬೋಧಿ ರತ್ನ ಬಂತೇಜಿ, ನಯನಲೋಕ ಬಂತೇಜಿ, ಮುಖಂಡರಾದ ಪಟಾಪಟ್ ನಾಗರಾಜು, ವೈ.ಪ್ರಕಾಶ್ ಪಟಾಪಟ್, ಕೋಲಾರ ಮುನಿವೆಂಕಟಪ್ಪ, ಆನಂದ ಚಕ್ರವರ್ತಿ, ಸಿ.ರಾವಣ, ವೆಂಕಟೇಶ್ ಮೂರ್ತಿ, ನಾಗರಾಜ ಮೌರ್ಯ, ನಂದಕುಮಾರ್, ವಿಜಯಕುಮಾರಿ, ತ್ರಿಪುರ ಸುಂದರಿ ಇದ್ದರು.