ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಡುಗುವ ದೈನಂದಿನ ಚಳಿಯಲ್ಲೂ ಕುಡಿಯಲು ನೀರು, ಪಶು ಮೇವಿನ ಕೊರತೆ ತೀವ್ರವಾಗಿ ಇದೆ. ಬೇಸಿಗೆಯಲ್ಲಿ ಯಾವ ಪರಿಸ್ಥಿತಿ ಇರಲಿದೆ ಎನ್ನುವುದು ಈಗಲೇ ಹೇಳಲಿಕ್ಕಾಗದು, ಬರ ಘೋಷಣೆ ಮಾಡಿರುವ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ದೂರಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ನಾಗೇಶ್ ಮಾತನಾಡಿ, ರಾಜ್ಯ ಸರ್ಕಾರ ಕೃಷಿ ಬೆಳೆ ನಷ್ಟ ಪರಿಹಾರಕ್ಕಾಗಿ ಪ್ರತಿ ಒಂದು ಗುಂಟೆಗೆ ₹ 65 ನಿಗದಿಪಡಿಸಿದೆ. ಇದು ಯಾವುದಕ್ಕೆ ಸಾಲುತ್ತೆ, ಜಿಲ್ಲೆಯಲ್ಲಿ 11 ಸಾವಿರ ಬೆಳೆ ನಷ್ಟ ರೈತ ಫಲಾನುಭವಿಗಳೆಂದು ಕೃಷಿ ಇಲಾಖೆ ಸರ್ಕಾರಕ್ಕೆ ಮನವಿ ಮಾಡಿ ₹ 4 ಕೋಟಿ ಪರಿಹಾರಕ್ಕೆ ಶಿಫಾರಸು ಮಾಡಿದೆ.
ಈವರೆಗೂ ರೈತರಿಗೆ ಬಿಡಿಗಾಸು ತಲುಪಿಲ್ಲ ಎಂದರು.ಬರ ನಿರ್ವಹಣೆಗಾಗಿ ತಾಲ್ಲೂಕಿನ ಪೂಜನಹಳ್ಳಿ ಬಳಿ ಮೂರು ತಿಂಗಳ ಹಿಂದೆ ₹ 8.60 ಲಕ್ಷ ವೆಚ್ಚದಲ್ಲಿ ಖರೀದಿಸಲಾಗಿದ್ದ ಪಶು ಮೇವು ಕಳಪೆಯಾಗಿದೆ. ಕೇಂದ್ರ ಬರ ಅಧ್ಯಯನ ತಂಡ ಬಂದಿದ್ದು ಹೊರತು ಪಡಿಸಿದರೆ ರಾಜ್ಯ ಸರ್ಕಾರ ಇತ್ತ ತಿರುಗಿ ನೋಡಿಲ್ಲ ಎಂದು ದೂರಿದರು.
ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಎ.ಸಿ.ಗುರುಸ್ವಾಮಿ, ರಾಜ್ಯ ಮುಖಂಡ ನಾರಾಯಣಗೌಡ, ಜಿ.ಪಂ. ಮಾಜಿ ಅಧ್ಯಕ್ಷ ಬಿ.ರಾಜಣ್ಣ, ಉಪಾಧ್ಯಕ್ಷ ಎಚ್.ಎಂ.ರವಿಕುಮಾರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ನಾಗರಾಜ್ಗೌಡ, ಪ್ರಧಾನ ಕಾರ್ಯದರ್ಶಿ ಸುನಿಲ್, ಟೌನ್ ಅಧ್ಯಕ್ಷ ರಮೇಶ್ ಕುಮಾರ್, ಕೇಶವ್ ಉಪಸ್ಥಿತರಿದ್ದರು.