ದೊಡ್ಡಬಳ್ಳಾಪುರ:ತಾಲ್ಲೂಕಿನ ಮುಕ್ಕೇನಹಳ್ಳಿಯ ರೈತ ಎಂ.ಆರ್. ಭಾಸ್ಕರ್ ಅವರ ಎರಡು ಎಕರೆ ಜಮೀನಿನಲ್ಲಿ ನಿರ್ಮಿಸಿರುವ ಫಾಲಿಹೌಸ್ನ ಮೇಲ್ಚಾವಣಿಗೆ ಹೊದಿಸಿದ್ದ ಪಾಲಿಥೀನ್ಬಿರುಗಾಳಿಗೆ ಸಿಲುಕಿ ಹರಿದು ಹೋಗಿದ್ದು, ಸುಮಾರು ₹ 7 ಲಕ್ಷ ನಷ್ಟವಾಗಿದೆ.
ಪಾಲಿಹೌಸ್ನಲ್ಲಿ ಬೆಳೆಯಲಾಗಿದ್ದ ಕ್ಯಾಪ್ಸಿಕಂ ಬೆಳೆಯೂ ಹಾನಿಗೆ ಒಳಗಾಗಿದೆ. ರೈತನಿಗೆ ಸಾಲ ನೀಡಿದ್ದ ಬ್ಯಾಂಕ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ರೈತ ಭಾಸ್ಕರ್ ಅವರು ಮೆಳೇಕೋಟೆ ಗ್ರಾಮ ಪಂಚಾಯಿತಿಗೆ ಸೂಕ್ತ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದಾರೆ.